Advertisement

ನಾಲ್ಕು ದಿನಗಳ ತರುವಾಯ ಮಾಲೀಕರನ್ನು ಸೇರಿದ “ನಳ’

11:43 PM Sep 09, 2020 | mahesh |

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದ ನಳ ಎಂಬ ಬೆಕ್ಕಿನ ಮರಿಯೊಂದು, ನಾಲ್ಕು ದಿನಗಳ ಹುಡುಕಾಟದ ನಂತರ ತನ್ನ ಮಾಲೀಕರಾದ ಆಸ್ತಾ ಶಾ ಅವರನ್ನು ಸೇರಿಕೊಳ್ಳುವ ಮೂಲಕ ಈ ಪ್ರಕರಣ ಸುಖಾಂತ್ಯ ಕಂಡಿದೆ.

Advertisement

ಆಸ್ತಾ ಶಾ ಅವರು, ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದರು. ಅವರು ತಮ್ಮೊಂದಿಗೆ ತಂದಿದ್ದ ಎರಡು ಸಾಕುಬೆಕ್ಕುಗಳನ್ನು ಅವು ಇದ್ದ ಪೆಟ್‌ ಬಾಕ್ಸ್‌ನಲ್ಲೇ ಕೂರಿಸಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಅದನ್ನು ಶಾ ಪ್ರಯಾಣಿಸಿದ ವಿಮಾನದ ಸರಕು ವಿಭಾಗದಲ್ಲಿರಿಸಲಾಗಿತ್ತು.

ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿನ ಬ್ಯಾಗೇಜ್‌ ವಿಭಾಗದಲ್ಲಿ ಪೆಟ್‌ ಬಾಕ್ಸ್‌ ಅನ್ನು ತೆರೆದು ನೋಡಿದಾಗ ನಳ ಎಂಬ ಬೆಕ್ಕಿನಮರಿ ನಾಪತ್ತೆಯಾಗಿತ್ತು. ಬಾಕ್ಸ್‌ನಿಂದ ಅದು ಹೇಗೋ ಹೊರಬಂದು, ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡಿತ್ತು. ತೀವ್ರ ಹುಡುಕಾಟದ ನಂತರ 4 ದಿನಗಳಾದ ಮೇಲೆ ನಿಲ್ದಾಣದಲ್ಲೇ ಅದು ಪತ್ತೆಯಾಗಿದೆ. ಈ ಹುಡುಕಾಟಕ್ಕೆ ದೆಹಲಿ ಮೂಲದ ವೈಲ್ಡ್‌ಲೈಫ್ ಎಂಬ ಸರ್ಕಾರೇತರ ಸಂಸ್ಥೆಯ ಸಿಬ್ಬಂ ದಿ ಸಹಾಯ ಮಾಡಿದ್ದಾರೆ. 4 ದಿನಗಳ ಕಾಲ ವಿಮಾನ ನಿಲ್ದಾಣದೊಳಗೆ ಅಡ್ಡಾ ಡಿಕೊಂಡಿದ್ದ ನಳನನ್ನು ಈಗ ಅದರ ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next