Advertisement

ಶಾಲೆಯಲ್ಲಿ ಆಟವಾಡುತ್ತ ಬಿದ್ದಿದ್ದ ಮಗು 3 ದಿನಗಳ ನಂತರ ಸಾವು

12:00 PM Feb 02, 2017 | Team Udayavani |

ಬೆಂಗಳೂರು: ಶಾಲೆಯಲ್ಲಿ ಆಟವಾಡುವಾಗ ಬಿದ್ದು ಗಾಯಗೊಂಡಿದ್ದ ಮೂರೂವರೆ ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ. ಶೇಷಾದ್ರಿಪುರಂ ನಿವಾಸಿ ಸ್ವಾಮಿ ಎಂಬುವರ ಮಗ ಹರ್ಷಿತ್‌ ಮೃತ ಬಾಲಕ. ಹರ್ಷಿತ್‌ನನ್ನು ಶೇಷಾದ್ರಿಪುರಂನ ಶ್ರೀಪುರದ ಸೇಂಟ್‌ ಥಾಮಸ್‌ ಶಾಲೆಯಲ್ಲಿ ಫ್ರೀ ನರ್ಸರಿಗೆ ದಾಖಲಿಸಲಾಗಿತ್ತು.

Advertisement

ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಮಗು ಶಾಲೆಯ ಆವರಣದಲ್ಲಿ ಆಟವಾಡುವಾಗ ಕೆಳಗೆ ಬಿದ್ದು, ತಲೆಗೆ ಪೆಟ್ಟಾಗಿತ್ತು. ಕೂಡಲೇ ಶಿಕ್ಷಕರು ಮಗುವಿನ ಪೋಷಕರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ತಲೆಯಿಂದ ರಕ್ತಸ್ರಾವ ಆಗಿರಲಿಲ್ಲ. ಆದರೆ ತಲೆಯ ಒಳಗೆ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಮಗು ಬಿದ್ದಿದ್ದು ಎಲ್ಲಿ?: ಪೋಷಕರು ಕೊಟ್ಟ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು ಶಾಲೆಯ ಹೊರ ಆವರಣದಲ್ಲಿ. ತರಗತಿಯ ಒಳಗೆ ಯಾವುದೇ ಘಟನೆ ನಡೆದಿಲ್ಲ. ತರಗತಿಯ ಆಟದ ವಸ್ತು ಅಥವಾ ಕಲಿಕೆಯ ವಸ್ತುವಿನಿಂದ ಗಾಯ ಆಗಿಲ್ಲ.

ಹೊರ ಆವರಣದಲ್ಲಿ ಆಟ ಆಡುವಾಗ ಬಿದ್ದಿದ್ದರಿಂದ ಅನಾಹುತ ಆಗಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಲವಾದ ವಸ್ತುವಿಗೆ ಅಥವಾ ಗೋಡೆ ಇನ್ನಿತರ ಭಾಗಕ್ಕೆ ತಲೆ ಅಪ್ಪಳಿಸಿದ್ದರಿಂದ ಹೀಗಾಗಿರಬಹುದು. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next