Advertisement

ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

12:20 AM Aug 13, 2020 | mahesh |

ಬೆಳ್ತಂಗಡಿ: ಅಡಿಕೆ ಧಾರಣೆ ಏರಿಕೆಯಿಂದ ಕೃಷಿಕರ ಮೊಗದಲ್ಲಿ ನಸುನಗು ಮೂಡುತ್ತಿರುವ ಹೊತ್ತಿಗೆ ಕೆಲವು ಕಡೆಗಳಲ್ಲಿ ಆಫ್ರಿಕನ್‌ ಬಸವನ ಹುಳು (African giant snail) ಇನ್ನಿಲ್ಲದಂತೆ ಕೃಷಿಕರನ್ನು ಹೈರಾಣಾಗಿಸುತ್ತಿದೆ.  ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ 100 ಎಕ್ರೆ ಪ್ರದೇಶದಲ್ಲಿ ಆಫ್ರಿಕನ್‌ ಬಸವನ ಹುಳುವಿನ ಕಾಟ ವಿಪರೀತವಾಗಿದೆ. ಐದಾರು ವರ್ಷಗಳ ಹಿಂದೆ ಕಾಸರಗೋಡು ಸೇರಿದಂತೆ ಆಲಂಕಾರು, ಸವಣೂರು, ಕೊçಲ ಗ್ರಾಮಗಳ ಕೃಷಿಕರಿಗೆ ಮಗ್ಗಲು ಮುಳ್ಳಾಗಿದ್ದ ಆಫ್ರಿಕನ್‌ ಬಸವನ ಹುಳು ಪ್ರಸಕ್ತ ಉರುವಾಲು ಗ್ರಾಮದಲ್ಲಿ ವ್ಯಾಪಕವಾಗಿದೆ.

Advertisement

ವಿಷಕ್ಕೂ ಜಗ್ಗುತ್ತಿಲ್ಲ
ನಿಶಾಚರಿಯಾಗಿರುವ ಇವು ಅಡಿಕೆಯ ಹಿಂಗಾರ, ತರ ಕಾರಿ ಬೆಳೆಗಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ತಿಂದುಬಿಡುತ್ತಿವೆ. ಅನೇಕ ಕೀಟನಾಶಕಗಳನ್ನು ಪ್ರಯೋಗಿಸಿದರೂ ಪ್ರಯೋಜನ ಶೂನ್ಯ ಎನ್ನುತ್ತಾರೆ ರೈತರು. ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಗಣನೆಗೆ ತೆಗೆದುಕೊಂಡಂತಿಲ್ಲ ಎಂಬುದು ಕೃಷಿಕರ ಅಳಲು.

ಗೊಬ್ಬರದೊಂದಿಗೆ ಬಂತೇ?
ಉರುವಾಲು ಗ್ರಾಮದ ಕೃಷಿಕರು ಕೋಳಿ, ಕುರಿ ಗೊಬ್ಬರವನ್ನು ಹೊರ ಜಿಲ್ಲೆಗಳಿಂದ ತರಿಸಿದ್ದು, ಅದರೊಂದಿಗೆ ಇವು ಬಂದಿರಬಹುದೇ ಎಂಬ ಶಂಕೆ ಕೃಷಿಕರದು.

ವೈರಿಗಳಿಗೂ ಬೇಡ!
ಆಫ್ರಿಕನ್‌ ಹುಳುಗಳು ತರಕಾರಿ, ಬಸಳೆ, ಸುವರ್ಣಗೆಡ್ಡೆ, ಕೆಸುಗಳನ್ನು ಕೂಡ ನಾಶ ಮಾಡುತ್ತಿವೆ. ಗದ್ದೆಯಲ್ಲಿ ಪೈರು ತಿಂದು ಮುಗಿದ ಬಳಿಕ ಮಣ್ಣನ್ನು ತಿನ್ನಲು ಆರಂಭಿಸುತ್ತವೆ. ಇವು ಸತ್ತರೆ ಪರಿಸರವಿಡೀ ದುರ್ನಾತ. ಚಿಪ್ಪು ತುಂಬಾ ಗಟ್ಟಿ ಜತೆಗೆ ವಿಷಕಾರಿ. ಮನುಷ್ಯನ ಕಾಲಿಗೆ ಚುಚ್ಚಿದಲ್ಲಿ ಕೊಳೆಯಲಾರಂಭಿಸುತ್ತದೆ. ಇತರ ಕೀಟಗಳ ವೈರಿಗಳು ಎನಿಸಿಕೊಂಡಿರುವ ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳಿಗೂ ಈ ಹುಳು ವಜ್ಯì. ಆದ್ದರಿಂದ ಸಂತಾನ ವೃದ್ಧಿಯಾಗುತ್ತಿದೆ.

ವರ್ಷಕ್ಕೆ 10 ಸಾವಿರ ಮೊಟ್ಟೆ
ಒಂದು ಹುಳು ವರ್ಷಕ್ಕೆ 10,000ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮಳೆ ಆರಂಭದೊಂದಿಗೆ ಕಾಣಿಸುವ ಇವು ಬಿಸಿಲು ಬಂದಾಕ್ಷಣ ನೆರಳಿಗಾಗಿ ಪಂಪ್‌ ಶೆಡ್‌, ಮರ, ಮನೆಗಳ ಗೋಡೆಗಳನ್ನು ಆಶ್ರಯಿಸುತ್ತವೆ. ಕನಿಷ್ಠ 150ರಿಂದ 200 ಗ್ರಾಂ ತೂಕ ಹೊಂದಿರುತ್ತವೆ.

Advertisement

ಸೂಕ್ತ ಔಷಧ ಸಿಂಪಡಿಸಿದಲ್ಲಿ ಆಫ್ರಿಕನ್‌ ಬಸವನ ಹುಳು ಬಾಧೆ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. Metaldehyde ಔಷಧ ಸಿಂಪಡಿಸಬೇಕು. ಯಾವ ಪ್ರಮಾಣ ಎಂಬುದನ್ನು ತಿಳಿಯ ಪಡಿಸಲು ತೋಟಗಾರಿಕೆ ಇಲಾಖೆ ಅಧಿ ಕಾರಿ ಗಳನ್ನು ಸ್ಥಳಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು.
– ಎಚ್‌.ಆರ್‌. ನಾಯಕ್‌, ಉಪ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next