Advertisement

ಬೆಳೆ ಮಾರಾಟಕ್ಕೆ ಕ್ರಮ: ಪಾಟೀಲ

05:46 PM Apr 29, 2020 | Naveen |

ಅಫಜಲಪುರ: ತಾಲೂಕಿನ ಉಮ್ಮರ್ಗಾ ಗ್ರಾಮದಲ್ಲಿ ರೈತರೊಬ್ಬರು ಸುಮಾರು 14 ಎಕರೆಯಲ್ಲಿ ಬೆಳೆದ ಬಾಳೆ ಬೆಳೆಯನ್ನು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕರ ಪಾಟೀಲ
ಪರಿಶೀಲಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟಾವಿಗೆ ಬಂದ ಬಾಳೆಯನ್ನು ಹಾಪಕಾಮ್ಸ್‌ ಅಥವಾ ದಲ್ಲಾಳಿಗಳಿಂದ ಐದು ರೂ.ಗೆ ಕೆ.ಜಿಯಂತೆ ಮಾರಾಟ ಮಾಡಿಸುವ ವ್ಯವಸ್ಥೆ ಮಾಡಿಸಲಾಗುವುದು ಎಂದು ತಿಳಿಸಿದರು. ಜಿ.ಪಂ ಸದಸ್ಯ ಹಾಗೂ ರೈತ ಸುಮಿತ್‌ ಪಾಟೀಲ ಅವರ ಹೊಲದಲ್ಲಿ ಬೆಳೆದ ಬಾಳೆ ಮಾರಾಟವಾಗದೆ ಗಿಡದಲ್ಲೇ ಕೊಳೆಯುತ್ತಿರುವ ಕುರಿತು ಮಾಹಿತಿ ಅರಿತು ಭೇಟಿ ನೀಡಿದ್ದೇವೆ. ಅದರಂತೆ ತಾಲೂಕಿನಾದ್ಯಂತ ಇತರ ಬೆಳೆ ಬೆಳೆದ ರೈತರ ಜಮೀನುಗಳಿಗೂ ಭೇಟಿ ನೀಡಿ ಅವರೆಲ್ಲರಿಗೂ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ. ಅಲ್ಲದೆ ಅವರು ಬೆಳೆದ ಬೆಳೆಯನ್ನು ಮಾರಾಟ ಮಾಡಿಸಲು ವ್ಯವಸ್ಥೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.

ಜಿ.ಪಂ ಸದಸ್ಯ ಸುಮೀತ್‌ ಪಾಟೀಲ ಮಾತನಾಡಿ, 14 ಎಕರೆಯಲ್ಲಿ ಬಾಳೆ ಕೃಷಿ ಮಾಡಿದ್ದೇವೆ. ಸದ್ಯ ಕಾಯಿ ಫಲವತ್ತಾಗಿ ಬೆಳೆದು ಕಟಾವಿಗೆ ಬಂದಿದೆ. ಲಾಕ್‌ಡೌನ್‌ ಇರುವುದರಿಂದ ಯಾರೂ ಖರೀದಿಗೆ ಬರುತ್ತಿಲ್ಲ. ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next