Advertisement

ವಿಧೇಯಕ ಜಾರಿಗೆ ಸಲಹೆ

06:35 AM Dec 24, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ಅಗತ್ಯವಾಗಿರುವ ವೃತ್ತಿಪರ ಆರೋಗ್ಯ ಕ್ಷೇತ್ರ ತಜ್ಞರನ್ನು ಒದಗಿಸಲು ಭಾರತೀಯ ನರ್ಸಿಂಗ್‌ ಮಂಡಳಿ (ಎನ್‌ಸಿಐ), ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವಿಫ‌ಲವಾಗಿದೆ. ಹೀಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ 2017 ವಿಧೇಯಕ ಜಾರಿಗೊಳಿಸುವುದು ಅಗತ್ಯ ಎಂದು ನೀತಿ ಆಯೋಗ ಹೇಳಿದೆ. ಇತ್ತೀಚೆದೆ ಬಿಡುಗಡೆಯಾದ “ನ್ಯೂ ಇಂಡಿಯಾ ಎಟ್‌ 75′ ಎಂಬ ದಿಕ್ಸೂಚಿ ದಾಖಲೆಯಲ್ಲಿ ಆಯೋಗ ಈ ಅಭಿಪ್ರಾಯ ಹೊಂದಿದೆ. ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿದೇಶಗಳ ಲ್ಲಿರುವ ಭಾರತೀಯ ಮೂಲದ ವೈದ್ಯರು ದೇಶದಲ್ಲಿ ಬಂದು ಕೆಲಸ ಮಾಡುವಂತಾಗಬೇಕು ಎಂದೂ ಹೇಳಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next