Advertisement

ಪೋಷಣ್‌ ಪಕ್ವಾಡ ಸದುಪಯೋಗಕ್ಕೆ ಸಲಹೆ

08:35 PM Mar 24, 2021 | Team Udayavani |

ಯಾದಗಿರಿ: ಮಹಿಳೆಯರು ಮತ್ತು ಮಕ್ಕಳು ರಾಷ್ಟ್ರೀಯ ಪೋಷಣ್‌ ಪಕ್ವಾಡ ಯೋಜನೆಯಡಿ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಸಲಹೆ ನೀಡಿದರು.

Advertisement

ನಗರದ ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಮಂಗಳವಾರ ರಾಷ್ಟ್ರೀಯ ಪೋಷಣ್‌ ಅಭಿಯಾನ ಯೋಜನೆಯಡಿ 2020-21ನೇ ಸಾಲಿನ ಜಿಲ್ಲಾ ಮಟ್ಟದ ಪೋಷಣ್‌ ಪಕ್ವಾಡ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಮತ್ತು ಮಕ್ಕಳು ಪೌಷ್ಟಿಕಾಂಶ ಆಹಾರ ಮತ್ತು ಹಸಿರು ತರಕಾರಿ ಸೇವನೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅನಾರೋಗ್ಯಗಳಿಗೆ ಈಡು ಮಾಡದೆ, ರಕ್ತಹೀನತೆ ತಡೆಗಟ್ಟಬೇಕು. ಗರ್ಭಿಣಿಯರಿಗೆ ಮಾತ್ರೆ ಕೊಡಬೇಕು ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯಾ ಧಿಕಾರಿ ಡಾ| ಭಗವಂತ ಅನ್ವರ್‌ ಮಾತನಾಡಿ, ಕಬ್ಬಿಣದ ಅಂಶವಿರುವ ಮತ್ತು ಪ್ರೋಟೀನ್‌, ಜೀವಸತ್ವವಿರುವ ಪೌಷ್ಟಿಕ ಆಹಾರ ಸೇವಿಸಬೇಕು. ಹಸಿರು ತರಕಾರಿ ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಸ್ಥವಾಗಿರುತ್ತದೆ ಎಂದು ಹೇಳಿದರು. ಜನನಿ ಶಿಶು ಸುರûಾ ಕಾರ್ಯಕ್ರಮದಡಿ ಉಚಿತ ಸೌಲಭ್ಯ ಪಡೆದುಕೊಳ್ಳಬೇಕು, ನೈರ್ಮಲ್ಯತೆ ಕಾಪಾಡಿ ಆರೋಗ್ಯದಿಂದ ಇರಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆಯುಷ್‌ ಜಿಲ್ಲಾ ಧಿಕಾರಿ ಡಾ| ವಂದನಾ ಗಾಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ್‌ ಕವಿತಾಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧ ಜಿ. ಮಣ್ಣೂರ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕ ಯಲ್ಲಪ್ಪ ಕೆ., ವೈದ್ಯಾಧಿ ಕಾರಿ ವಿನುತಾ, ಯೋಗ ಗುರು ಅನಿಲ್‌ ಗುರೂಜಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next