Advertisement

ಬಿಜೆಪಿ ಸಾಧನೆ ಜನರಿಗೆ ತಿಳಿಸಲು ಸಲಹೆ 

11:09 AM Jul 05, 2017 | Team Udayavani |

ಯಾದಗಿರಿ: ವಿಧಾನಸಭಾ ಮತಕ್ಷೇತ್ರದ ವಿಸ್ತಾರಕರು ಕ್ಷೇತ್ರದ ಪ್ರತಿ ಬೂತ್‌ಗೂ ಭೇಟಿ ನೀಡಿ ಕೇಂದ್ರ ಬಿಜೆಪಿ ಸರ್ಕಾರದ
ಸಾಧನೆಗಳನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ವಿಸ್ತಾರಕರ ಉಸ್ತುವಾರಿ ತ್ರಿವಿಕ್ರಮ ಜೋಶಿ
ಹೇಳಿದರು.

Advertisement

ನಗರದ ಬಿಜೆಪಿ ಕಚೇರಿ ಎದುರು ವಿಸ್ತಾರಕರಿಗೆ ಪಕ್ಷದ ಸಾಧನೆಗಳ ಕುರಿತ ಕಿಟ್‌ಗಳನ್ನು ನೀಡುವ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಸಾಧನೆಗಳನ್ನು ಪ್ರತಿ ಮತದಾರರ ಮನ ಮುಟ್ಟಿಸುವ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಉಸ್ತುವಾರಿ ಎನ್‌. ಶಂಕ್ರಪ್ಪ ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ನಿಷ್ಠೆಯಿಂದ,
ಪ್ರಾಮಾಣಿಕವಾಗಿ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರ ಬರಲು ಸಾಧ್ಯವೆಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 4
ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಮಾಜಿ ಶಾಸಕ ಡಾ| ವೀರಬಸಂತರಡ್ಡಿ ಮುದ್ನಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ
ಹಾಗೂ ಸಾಧನೆಗಳು ಸಮಬಾಳು ಸಮಪಾಲು ಅಖಂಡತೆ ಹಾಗೂ ಏಕತೆಗೆ ಬಿಜೆಪಿ ಕಾರಣ. ಯುವಕರು ಮುಂದೆ
ಬಂದು ಪಕ್ಷವನ್ನು ಸಂಘಟಿಸಬೇಕೆಂದು ಹೇಳಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಬಸಪ್ಪಗೌಡ ಸಿದ್ದಣಗೌಡ
ಕಾಡಂನೋರ್‌, ಡಾ| ಭೀಮಣ್ಣ ಮೇಟಿ, ಖಂಡಪ್ಪ ದಾಸನ, ವೆಂಕಟರೆಡ್ಡಿ ಅಬ್ಬೆತುಮಕೂರು, ವೆಂಕಟೇಶ ಮುಷ್ಟೂರು, ಪರಶುರಾಮ ಕುರಕುಂದಿ, ಮುಸ್ತಾಫ ಪಟೇಲ್‌, ಹಣಮಂತ ಇಟಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next