Advertisement

ವೈಜ್ಞಾನಿಕ ಆಡು ಸಾಕಾಣಿಕೆಗೆ ಸಲಹೆ

05:37 PM Jan 28, 2022 | Shwetha M |

ಇಂಡಿ: ವೈಜ್ಞಾನಿಕ ಆಡು ಸಾಕಾಣಿಕೆ ರೈತರಿಗೆ ಲಾಭದಾಯಕ. ಹೈನುಗಾರಿಕೆ ಉಪಕಸುಬಾಗಿದ್ದು, ಇದನ್ನು ವೈಜ್ಞಾನಿಕವಾಗಿ ಮಾಡಿದಲ್ಲಿ ಅತಿ ಹೆಚ್ಚು ಆದಾಯ ಪಡೆದು ಯಶಸ್ವಿಯಾಗಿ ಹೊರ ಹೊಮ್ಮಬಹುದು ಎಂದು ಕೆವಿಕೆ ವಿಜ್ಞಾನಿ ಡಾ| ಸಂತೋಷ ಶಿಂಧೆ ಹೇಳಿದರು.

Advertisement

ಗುರುವಾರ ಪಟ್ಟಣದ ರೈಲು ನಿಲ್ದಾಣ ರಸ್ತೆಯ ಕೃಷಿ ವಿಜ್ಞಾನಿ ಕೇಂದ್ರದಲ್ಲಿ ವೈಜ್ಞಾನಿಕ ಆಡು ಸಾಕಣಿಕೆ ತರಬೇತಿಯಲ್ಲಿ ಅವರು ಮಾತನಾಡಿದರು.

ಆಡುಗಳು ಅವುಗಳ ತಳಿಗಳ ಆಯ್ಕೆ, ಆಹಾರ, ಪೋಷಣೆ ಮತ್ತು ಕಾಯಿಲೆಗಳ ಕುರಿತು ರೈತರಿಗೆ ಮೂರು ದಿನಗಳ ಕಾಲ ಉಪನ್ಯಾಸ ಮತ್ತು ಆಡು ಸಾಕಾಣಿಕೆ ಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿ ಒದಗಿಸುತ್ತೇವೆ ಎಂದರು.

ತರಬೇತಿಯಲ್ಲಿ 50ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಪಾಲ್ಗೊಂಡಿದ್ದರು. ವಿಜ್ಞಾನಿ ಡಾ| ಎಸ್‌.ಎಸ್‌. ಅಂಜುಮ್‌ ಸ್ವಾಗತಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next