Advertisement

ಜಾನುವಾರು ಶೆಡ್‌ ನಿರ್ಮಾಣಕ್ಕೆ ಸಲಹೆ

07:45 AM May 31, 2020 | Lakshmi GovindaRaj |

ಚಿಕ್ಕಬಳ್ಳಾಪುರ: ನರೇಗಾ ಯೋಜನೆಯಡಿ ಬರುವಂತಹ ಜಾನುವಾರುಗಳ ಶೆಡ್‌ ನಿರ್ಮಾಣದ ಸಹಾಯಧನದ ಯೋಜನೆಯ ಸೌಲಭ್ಯವನ್ನು ಜಿಲ್ಲೆಯ ಪ್ರತಿಯೊಬ್ಬ ರೈತರು ಬಳಸಿಕೊಳ್ಳುವಂತೆ ಪಶು ವೈದ್ಯಾಧಿಕಾರಿಗಳು ಅವರಿಗೆ ಅರಿವು  ಮೂಡಿ ಸಬೇಕೆಂದು ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌ ಸೂಚಿಸಿದರು.

Advertisement

ನಗರದ ಅಗಲಗುರ್ಕಿ ತೋಟಗಾರಿಕೆ ಇಲಾಖೆ ಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನು ವಾರು ಗಳಿಗೊಸ್ಕರ ಶೆಡ್‌ಗಳ ನಿರ್ಮಾಣದ ಬಗ್ಗೆ ಅಧಿಕಾರಿಗಳ  ಮೂಲಕ ರೈತರಲ್ಲಿ ಉತ್ತೇಜನ ನೀಡುವ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಕಾರಣ ರೈತರಿಗೆ ನರೇಗಾ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಲುಪುತ್ತಿಲ್ಲ ಎಂದರು.

ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದಾಗ  100 ಮನೆಗಳ ಪೈಕಿ ಕೇವಲ 40 ಮನೆಗಳಲ್ಲಿ ಮಾತ್ರ ಜಾನುವಾರುಗಳಿಗೆ ಶೆಡ್‌ ನಿರ್ಮಾಣಮಾಡಲಾಗಿರುತ್ತದೆ. ಅಧಿಕಾರಿಗಳು ರೈತರಿಗೆ ಶೆಡ್‌ಗಳ ಬಗ್ಗೆ ಅರಿವು ಮೂಡಿಸಿ ತ್ವರಿತಗತಿಯಲ್ಲಿ ಶೆಡ್‌ಗಳನ್ನು ನಿರ್ಮಾಣ ಮಾಡಬೇಕಿರುತ್ತದೆ ಹಾಗೂ  ಪ್ರತಿ ತಿಂಗಳಿಗೊಮ್ಮೆ ಎಷ್ಟು ಶೆಡ್‌ ನಿರ್ಮಾಣವಾಗಿರುತ್ತದೆ ಎಂಬ ವರದಿ ನೀಡಬೇಕು.

ಚಿಕ್ಕಬಳ್ಳಾಪುರ ಪಶುಪಾಲನಾ ಮತ್ತು ಪಶು ವೈದ್ಯಾಧಿಕಾರಿ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಸಿ.ನಾಗರಾಜ್‌, ಚಿಕ್ಕಬಳ್ಳಾಪುರ ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಧುರನಾಥ ರೆಡ್ಡಿ, ಚಿಂತಾಮಣಿ ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಭೈರಾರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next