Advertisement

ಮುಖ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಬೇಸತ್ತು ಮಕ್ಕಳೇ ರಸ್ತೆ ಗುಂಡಿ ಮುಚ್ಚಿದರು..!

11:37 AM Dec 16, 2021 | Team Udayavani |

ಗುಡಿಬಂಡೆ: ಪಟ್ಟಣದ ಠಾಣೆ ಪಕ್ಕದಿಂದ ರಾಮಪಟ್ಟಣ-ಗುಡಿಬಂಡೆ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಭಾರೀ ಗುಂಡಿಗಳು ಬಿದ್ದಿದ್ದು ಮಕ್ಕಳೇ ರಸ್ತೆಯ ಗುಂಡಿ ಮುಚ್ಚಿ ಮಾದರಿಯಾದರು.

Advertisement

ಸಂಚಾರ ಕಷ್ಟವಾಗಿತ್ತು: ಗುಡಿಬಂಡೆ ಪಟ್ಟ ಣದ ನಾರೆಪ್ಪ ಬಡಾ ವಣೆಯಲ್ಲಿ ಹಾದು ಹೋಗುವ ರಸ್ತೆ ಇತ್ತೀಚೆಗೆ ಬಿದ್ದ ಮಳೆ ಹಾಗೂ ರಾಮಪಟ್ಟಣ ರಸ್ತೆಯ ಚರಂಡಿ ನೀರನ್ನು ಈ ಭಾಗಕ್ಕೆ ತಿರುಗಿಸಿರುವುದರಿಂದ, ಚರಂಡಿ ನೀರು, ಮನೆಗಳ ನೀರು ರಸ್ತೆಗೆ ಬಂದು ಸಣ್ಣ ಗಾತ್ರದಕಾಲು ವೆಗಳಾಗಿ ಪರಿಣಮಿಸಿತ್ತು.

ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ಓಡಾಡಲುಕಷ್ಟಕರವಾಗಿತ್ತು. ಗುಡಿಬಂಡೆಯಿಂದ ರಾಮಪಟ್ಟಣಕ್ಕೆ ಹೋಗುವ ರಸ್ತೆ ಕಿರಿದಾಗಿದ್ದು, ಒಂದು ಸಣ್ಣಗಾತ್ರದ ವಾಹನ ಬಂದರೆ, ಕಿರಿದಾದ ಬೈಕ್‌ ಸಹ ಸಂಚರಿಸದ ಸ್ಥಿತಿಯಿತ್ತು. ಇನ್ನು ಆ ರಸ್ತೆಯಲ್ಲಿ ಸಂಚರಿಸಿದರೆ ಅಪಾಯಕ್ಕೆ ತುತ್ತಾಗಬಹುದಾದ ಸಂದರ್ಭ ಹೆಚ್ಚಿತ್ತು. ಪೊಲೀಸ್‌ ಠಾಣೆಯ ಪಕ್ಕದಲ್ಲಿನ ರಸ್ತೆ ಯಲ್ಲಿ ಹೆಚ್ಚಿನ ಜನತೆ ಸಂಚರಿಸುತ್ತಿದ್ದರು.

ರಸ್ತೆ ಸಂಚಾರಕ್ಕೆ ಸಂಚಕಾರವಾಗಿರುವುದ ರಿಂದ ಪಪಂ ಮುಖ್ಯಾಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋ ಜನವಾಗಿರಲಿಲ್ಲ. ಇದರಿಂದ ಬೇಸತ್ತ ಸ್ಥಳಿಯ ಮಕ್ಕಳೇ ಆಟೋದಲ್ಲಿ ತ್ಯಾಜ್ಯ ಮಣ್ಣನ್ನು ತಂದು ಗುಂಡಿ ಮುಚ್ಚಿದ್ದಾರೆ. ಅಧಿಕಾರಿಗಳು ಮಾಡುವ ಕೆಲಸವನ್ನು ಮಕ್ಕಳು ಮಾಡಿರುವುದರಿಂದ ಸಾರ್ವ ಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next