Advertisement

ನಗರ ಪುನರ್‌ ನಾಮಕರಣದಲ್ಲಿ ಸಿಎಂ ಯೋಗಿ ಬ್ಯುಸಿ: ಶಿವಸೇನೆ ಟೀಕೆ

12:31 PM Dec 06, 2018 | udayavani editorial |

ಮುಂಬಯಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಮ್ಮ ರಾಜ್ಯದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬದಲು ನಗರಗಳ ಪುನರ್‌ ನಾಮಕರಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ಶಿವ ಸೇನೆ, ಬುಲಂದ್‌ ಶಹರ್‌ ಹಿಂಸೆಯ ಹಿನ್ನೆಲೆಯಲ್ಲಿ, ಟೀಕಿಸಿದ್ದಾರೆ.

Advertisement

‘ಸೈನಿಕರು ಮತ್ತು ಪೊಲೀಸರಿಗೆ ಯಾವುದೇ ಧರ್ಮ ಎಂಬುದಿಲ್ಲ. ಅವರು ತಮ್ಮ ಕರ್ತವ್ಯಕ್ಕಾಗಿ ಸದಾಕಾಲ ಶ್ರಮಿಸುತ್ತಾರೆ. ಆದರೆ ಅಧಿಕಾರದಲ್ಲಿರುವವರು ಹೊಣೆ ಅರಿತು ಆಡಳಿತೆಯ ಜವಾಬ್ದಾರಿಗಳನ್ನು ನಿಭಾಯಿಸಬೇಕು’ ಎಂದು ಶಿವ ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಬರೆದಿದೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಷಯವನ್ನು ಮತ್ತೆ ಪ್ರಸ್ತಾಪಿಸಿರುವ ಶಿವ ಸೇನೆ, ರಾಮ ಮಂದಿರ ನಿರ್ಮಾಣವಾಗುವುದು ಯಾವಾಗ ಎಂದು ಪ್ರಶ್ನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next