Advertisement

ಅದಾನಿ ಯುಪಿಸಿಎಲ್‌: 29.58 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ

05:07 PM Mar 16, 2018 | |

ಪಡುಬಿದ್ರಿ : ಉಡುಪಿ ಪವರ್‌ ಕಾರ್ಪೊರೇಶನ್‌ ಸಂಸ್ಥೆ ತನ್ನ ಸಿಎಸ್‌ಆರ್‌ ಯೋಜನೆ ಯಡಿ ಸಂಪೂರ್ಣ ಹದಗೆಟ್ಟಿರುವ ಕುಂಜೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಸುಮಾರು 400 ಮೀಟರ್‌ ಉದ್ದದ ಸಂಪರ್ಕ ರಸ್ತೆಯನ್ನು ಸುಮಾರು 29.58 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿಗೆ ಬುಧವಾರ (ಮಾ. 14) ಚಾಲನೆ ನೀಡಲಾಯಿತು. ಅದಾನಿ ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಹಾಗೂ ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌ ಕಾಮಗಾರಿಗೆ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಆಳ್ವ ಅವರು ಅದಾನಿ ಯುಪಿಸಿಎಲ್‌ ತನ್ನ ಸಿಎಸ್‌ಆರ್‌ ಅನುದಾನ ದಡಿ ದೊಡ್ಡ ಮೊತ್ತದ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಸುತ್ತಮುತ್ತಲಿನ 7 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿದ್ದು, ಇನ್ನೂ ಹಲವಾರು ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಯುಪಿಸಿಎಲ್‌ ಗ್ರಾಮೀಣಾಭಿವೃದ್ಧಿಯ ಜತೆಗೆ ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರಗಳಲ್ಲೂ ಮಾದರಿ ಕೆಲಸಗಳನ್ನು ಮಾಡುತ್ತಿದೆ ಎಂದರು. ಗ್ರಾ. ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌ ಮಾತನಾಡಿದರು. 

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಎಲ್ಲೂರು ದೇವಸ್ಥಾನದ ಪವಿತ್ರಪಾಣಿ ಕೆ.ಎಲ್‌. ಕುಂಡಂತಾಯ, ಕುಂಜೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ದೇವರಾಜ್‌ ರಾವ್‌ ನಡಿಮನೆ, ಸ್ಥಳೀಯರಾದ ಶ್ರೀವತ್ಸ ರಾವ್‌, ಸತೀಶ್‌ ಕುಂಡಂತಾಯ, ಪಿಡಿಒ ಮಮತಾ ಶೆಟ್ಟಿ, ಗ್ರಾ. ಪಂ. ಸದಸ್ಯರಾದ ಸತೀಶ್‌ ಶೆಟ್ಟಿ ಗುಡ್ಡೆಚ್ಚಿ, ರಹೀಂ ಕುಂಜೂರು, ರಾಜೇಂದ್ರ ಸಾಲಿಯಾನ್‌, ಸದಾಶಿವ ಶೆಟ್ಟಿ, ಕಂಪೆನಿಯ ಎಜಿಎಂ ಗಿರೀಶ್‌ ನಾವಡ, ಸೀನಿಯರ್‌ ಮ್ಯಾನೇಜರ್‌ ರವಿ ಜೀರೆ, ಮ್ಯಾನೇಜರ್‌ ವಸಂತ್‌, ಅದಾನಿ ಫೌಂಡೇಶನ್‌ನ ಸುಕೇಶ್‌ ಸುವರ್ಣ, ಅನುದೀಪ್‌ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next