Advertisement

ಅದಾನಿ ವಿವಾದ: ತಜ್ಞರ ಸಮಿತಿ ರಚನೆಗೆ ಕೇಂದ್ರ ಅಸ್ತು

11:21 PM Feb 13, 2023 | Team Udayavani |

ಹೊಸದಿಲ್ಲಿ: ಹಿಂಡನ್‌ಬರ್ಗ್‌ ವರದಿಯ ಬಳಿಕ ಅದಾನಿ ಸಮೂಹ ಸಂಸ್ಥೆಯ ಷೇರುಗಳು ಏಕಾಏಕಿ ಪತನಗೊಂಡು ಹೂಡಿಕೆದಾರರು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲು ನಮ್ಮ ಒಪ್ಪಿಗೆ ಯಿದೆ ಎಂದು ಸುಪ್ರೀಂಗೆ ಕೇಂದ್ರ ಸರಕಾರ ತಿಳಿಸಿದೆ.

Advertisement

ಎಲ್ಲ ಪರಿಸ್ಥಿತಿಯನ್ನೂ ನಿಭಾಯಿಸುವ ಸಾಮರ್ಥ್ಯ ಸೆಬಿಗಿದೆ. ಪ್ರಸ್ತುತ ನಿಯಂತ್ರಣ ಸಂಸ್ಥೆಯನ್ನು ಕಡೆಗಣಿಸದೇ ಸಮಿತಿಯನ್ನು ರಚಿಸಲಾಗುತ್ತದೆ. ಏಕೆಂದರೆ ಸೆಬಿಯ ಮೇಲೆ ಈ ಸಮಿತಿ ನಿಗಾ ಇಟ್ಟಿದೆ ಎಂಬಂಥ ತಪ್ಪು ಸಂದೇಶವು ವಿದೇಶಿ ಹೂಡಿಕೆದಾರರಿಗೆ ರವಾನೆಯಾಗಬಾರದು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ. ಜತೆಗೆ ಸಮಿತಿಯ ಸದಸ್ಯರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ. ಫೆ.17ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next