Advertisement

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

06:56 PM Oct 20, 2021 | Team Udayavani |

ಕೊಲ್ಲೂರು: ಬಹುಭಾಷ ಖ್ಯಾತ ಹಿರಿಯ ನಟಿ ಲಕ್ಷ್ಮೀ ಅ.20ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷಪೂಜೆ ಸಲ್ಲಿಸಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ತಾಯಿ ಮೂಕಾಂಬಿಕೆಯ ಸಾನ್ನಿಧ್ಯದಲ್ಲಿ ವಿಶೇಷ ಶಕ್ತಿ ಇದೆ. ಸಿದ್ಧಿ ಕ್ಷೇತ್ರವಾದ ಇಲ್ಲಿಗೆ ಬಂದಾಗ ಕಷ್ಟ-ಸಂಕಷ್ಟಗಳಿಗೆ ಪರಿಹಾರ ದೊರಕುವುದು. ಕಲಾವಿದೆಯಾಗಿ ಈ ಮಟ್ಟಕ್ಕೆ ಏರಲು ದೇವಿಯ ಪ್ರೇರಣೆಯೇ ಕಾರಣ. ಭಕ್ತರಿಗೆ ಸಕಲ ಸೌಕರ್ಯ ಒದಗಿಸುತ್ತಿರುವ ಇಲ್ಲಿನ ವ್ಯವಸ್ಥೆ ಸಂತಸ ತಂದಿದೆ ಎಂದರು.

ಲಕ್ಷ್ಮೀ ಅವರ ಪತಿ ಖ್ಯಾತ ನಿರ್ದೇಶಕ ಶಿವಚಂದ್ರನ್‌, ದೇಗುಲದ ಪಿ.ಆರ್‌.ಒ. ಜಯಕುಮಾರ್‌, ಕ್ಷೇತ್ರ ಪುರೋಹಿತ ಸುರೇಶ ಭಟ್‌, ಲಕ್ಷ್ಮೀ ಕುಟುಂಬದ ಆಪ್ತರಾದ ಹರೀಶ ಪೂಜಾರಿ ಕುಕ್ಕೆಹಳ್ಳಿ, ಲಕ್ಷ್ಮೀನಾರಾಯಣ, ದೇವದಾಸ ಸುವರ್ಣ ಉಡುಪಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಖ್ಯಾತ ನಾಣ್ಯ ಸಂಗ್ರಾಹಕ ಎಚ್‌. ಖಂಡೋಬ ರಾವ್‌ಗೆ ಅಭಿನಂದನೆ,ಅಮೂಲ್ಯ ಸಿರಿ ಗ್ರಂಥ ಬಿಡುಗಡೆ

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next