Advertisement

ಶಾಸಕ ಅಭಯಚಂದ್ರ ಪರ ನಟಿ ಚಿರಶ್ರೀ ಅಂಚನ್‌ ಮತಯಾಚನೆ 

11:27 AM May 06, 2018 | Team Udayavani |

ಮೂಲ್ಕಿ: ಪ್ರಾಮಾಣಿಕತೆ ಮತ್ತು ಜನರ ನೋವು ನಲಿವುಗಳಿಗೆ ಸ್ಪಂದಿಸುವ ನೇರ ನಡೆ, ನುಡಿಯ ರಾಜಕಾರಣಿ ಕೆ.ಅಭಯಚಂದ್ರ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದು ಮೂಲ ಸೌಕರ್ಯಗಳನ್ನು ಒದಗಿಸಿರುವುದು ಕಣ್ಣಾರೆ ಕಂಡಿರುವ ನಮಗೆ ಮರೆಯಲು ಸಾಧ್ಯವಿಲ್ಲ. ಅವರು ಮತ್ತೆ ಶಾಸಕರಾಗಿ ಬರುವಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ನಟಿ ಚಿರಶ್ರೀ ಅಂಚನ್‌ ಹೇಳಿದರು.

Advertisement

ಅವರು ಮೂಲ್ಕಿಯ ಕಾರ್ನಾಡು ಸದಾಶಿವ ರಾವ್‌ ನಗರದಲ್ಲಿ ಮತ ಯಾಚನೆಗಾಗಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಚಿರಶ್ರೀ ಅಂಚನ್‌ ಅವರು ಬಿಜಾಪುರ ಕಾಲನಿ ಮತ್ತು ಕಾರ್ನಾಡು ಸದಾಶಿವ ರಾವ್‌ ನಗರ ಪರಿಸರದಲ್ಲಿ ನೂರಾರು ಮನೆಗಳಿಗೆ ಭೇಟಿ ನೀಡಿ ಶಾಸಕ ಕೆ. ಅಭಯಚಂದ್ರ ಪರವಾಗಿ ಮತ ಯಾಚನೆ ಮಾಡಿದರು.

ರಾಜ್ಯ ಕಾಂಗ್ರೆಸ್‌ ಪದಾಧಿಕಾರಿ ರಾಜಶೇಖರ ಕೋಟ್ಯಾನ್‌, ಕರುಣಾಕರ ಶೆಟ್ಟಿ,ಧನಂಜಯ ಕೋಟ್ಯಾನ್‌, ಪೂರ್ಣಿಮಾ ಮಧು, ಎಂ. ಬಿಖಾನ್‌, ಶಮೀರ್‌ ಎ.ಎಚ್‌., ನ.ಪಂ. ಸದಸ್ಯರಾದ ಬಿ.ಎಂ. ಆಶೀಫ್‌, ಬಶೀರ್‌ ಕುಳಾಯಿ, ವಿಮಲಾ ಪೂಜಾರಿ, ಯೋಗೀಶ್‌ ಕೋಟ್ಯಾನ್‌, ವಸಂತ ಸುವರ್ಣ, ಪುತ್ತು ಭಾವಾ ಲೋಕೇಶ್‌ ಕೋಟ್ಯಾನ್‌, ಅಶೋಕ್‌ ಪೂಜಾರ್‌ ಮತ್ತಿತರರು ಉಪಸ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next