Advertisement

ಸದ್ದಿಲ್ಲದೇ ಮಂಗಳೂರಿಗೆ ಬಂದಿದ್ದ ನಟಿ ಐಶ್ವರ್ಯಾ ರೈ!

11:19 AM Dec 04, 2017 | Team Udayavani |

ಮಂಗಳೂರು: ಬಾಲಿವುಡ್‌ ಸ್ಟಾರ್‌ಗಳು ಆಗಮಿಸುತ್ತಾರೆ ಎಂದರೆ ಸುದ್ದಿ ಆಗುವುದು ಸಹಜ. ಆದರೆ ಖ್ಯಾತ ನಟಿ ಐಶ್ವರ್ಯಾ ರೈ ಶನಿವಾರ ಮಂಗಳೂರಿಗೆ ಆಗಮಿಸಿದ್ದು ಹೊರ ಜಗತ್ತಿಗೆ ಗೊತ್ತೇ ಆಗಲಿಲ್ಲ!

Advertisement

ನಗರದ ಟಿಎಂಎ ಪೈ ಹಾಲ್‌ನಲ್ಲಿ ಮದುವೆ ಸಮಾರಂಭದ ಔತಣ ಕೂಟವೊಂದರಲ್ಲಿ ಪಾಲ್ಗೊಳ್ಳಲು ನಟಿ ಐಶ್ವರ್ಯ ಅವರು ಶನಿವಾರ ಮುಂಬಯಿಯಿಂದ ಆಗಮಿಸಿದ್ದರು. ಅವರೊಂದಿಗೆ ಮಗಳು ಆರಾಧ್ಯಾ ಮತ್ತು ತಾಯಿ ಬೃಂದಾ ಅವರೂ ಇದ್ದರು. 

ಬೃಂದಾ ಅವರ ಸಹೋದರ ಸೋಂತಾಡಿ ಉದಯಕುಮಾರ್‌ ಶೆಟ್ಟಿ ಅವರ ಪುತ್ರ ಪ್ರಜ್ವಲ್‌ ಅವರ ವಿವಾಹ ಔತಣಕೂಟಕ್ಕೆ ನಟಿ ಐಶ್ವರ್ಯಾ ಅವರು ರಾತ್ರಿ 10.30ರ ಸುಮಾರಿಗೆ ಬಂದಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮುಂಬಯಿಗೆ ತೆರಳಿದ್ದಾರೆ. ಸಂಬಂಧಿಕರೊಂದಿಗೆ ಬೆರೆತು ತುಳುವಿನಲ್ಲೇ ಮಾತನಾಡಿದ ಅವರು, ಕರಾವಳಿಯ ಮಾಂಸಾಹಾರಿ ಖಾದ್ಯಗಳನ್ನು ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next