Advertisement

ನಟರು ದೇಶದ ನಾಯಕರಾಗುತ್ತಿರುವುದು ದುರಂತ 

02:12 PM Nov 12, 2017 | |

ಬೆಂಗಳೂರು: ‘ನಟರು ರಾಜಕೀಯ ಪ್ರವೇಶಿಸಿ ದೇಶದ ನಾಯಕರಾಗುತ್ತಿರುವುದು ದುರಂತ’ ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಅಭಿಪ್ರಾಯ ಪಟ್ಟಿದ್ದಾರೆ. 

Advertisement

ಭಾನುವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ರೈ’ನಟರು ರಾಜಕೀಯ ಪ್ರವೇಶಿಸುವುದು ನನಗೆ ಇಷ್ಟವಿಲ್ಲ.ನಟರಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ,ಹಾಗಾಗಿ ಜವಾಬ್ದಾರಿ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕು’ ಎಂದರು. 

‘ನಾನು ಯಾವುದೇ ಪಂಥ, ಬ್ರ್ಯಾಂಡ್‌ಗೆ ಸೇರಿದವನಲ್ಲ, ಪ್ರಚಾರಕ್ಕಾಗಿ  ಹೇಳಿಕೆ ನೀಡುವುದಿಲ್ಲ. ಯಾವುದೇ  ಪಕ್ಷದ ಮೇಲೆ ನಂಬಿಕೆ ಇಲ್ಲ. ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿಲ್ಲ’ ಎಂದಿದ್ದಾರೆ.

‘ಮೋದಿ ಆಳ್ವಿಕೆಯಲ್ಲಿ ದೇಶದಲ್ಲಿ ಎದ್ದು ನಿಂತು ಮಾತನಾಡುವುದು ಕಷ್ಟ’ ಎಂದು ಅವರು ಪುನರುಚ್ಚರಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಪ್ರಕಾಶ್‌ ರೈ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next