Advertisement

ಅವಕಾಶಕ್ಕಾಗಿ ಅಲೆದ ದಿನಗಳನ್ನು ನೆನೆದು ಕಣ್ಣೀರು ಸುರಿಸಿದ ನಟ ಸೃಜನ್

01:05 PM Jul 17, 2021 | Team Udayavani |

ಪಟ-ಪಟ ಅಂತಾ ಅರಳು ಹುರಿದಂತೆ ಮಾತಾಡುವ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಪ್ರತಿಭಾವಂತ ನಟ ಅಂತಾ ಎಲ್ಲರಿಗೂ ಗೊತ್ತು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಕುಟುಂಬದವರೂ ಅನ್ನೋದು ಗೊತ್ತು. ಆದರೆ, ಸಿನಿಮಾದಲ್ಲಿ ಅವಕಾಶಕ್ಕಾಗಿ ಇವರು ಪಟ್ಟ ಕಷ್ಟ ಎಂತಹದು ಎನ್ನುವುದು ಬಹುತೇಕರಿಗೆ ತಿಳಿಯದ ವಿಚಾರ.

Advertisement

ಮಜಾ ಟಾಕೀಸ್ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಸೃಜನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವಕಾಶಕ್ಕೆ ತಾವು ಅಲೆದದ್ದನ್ನು ಎಲ್ಲರೆದರು ಬಿಚ್ಚಿಟ್ಟಿದ್ದಾರೆ.

ಹೊಸದಾಗಿ ಪ್ರಾರಂಭವಾಗಿರುವ ರಾಜಾರಾಣಿ ರಿಯಾಲಿಟಿ ಶೋನಲ್ಲಿ ಸೃಜನ್ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೃಜನ್ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ಸುಬ್ಬಯ್ಯ ನಾಯ್ಡು ಮೊಮ್ಮೊಗನಾಗಿ, ಗಿರಿಜಾ ಲೋಕೇಶ್​-ಲೋಕೇಶ್​ ಮಗನಾಗಿ, ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​ ಹೊಡೆದಿದ್ದೇನೆ. ಎಷ್ಟೋ ಪ್ರಯತ್ನಗಳನ್ನು ಮಾಡಿದ್ದೇನೆ. ಆ ತಾಳ್ಮೆಯನ್ನು ಕಲಿಸಿಕೊಡೋದೆ ರಂಗಭೂಮಿ. ಅದಕ್ಕಾಗಿಯೇ ಅದನ್ನು ರಂಗಭೂಮಿ ಎಂದು ಕರೆಯೋದು’ ಎಂದು ಸೃಜನ್​ ಕಣ್ಣೀರು ಹಾಕಿದ್ದಾರೆ.

ಜೀವನದ ಅಂತ್ಯ ಎನ್ನುವುದಿದ್ದರೆ ಅದು ರಂಗಭೂಮಿ ಮೇಲೆ ಆಗಲಿ ಅನ್ನೋದು ನನ್ನ ಆಸೆ ಎಂದು ಸೃಜನ್​ ಹೇಳಿದ್ದಾರೆ. ಈ ವಿಡಿಯೋ ತುಣುಕನ್ನು ತಮ್ಮ ಟ್ವಿಟರಿನಲ್ಲಿ ಸೃಜನ್ ಹಂಚಿಕೊಂಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next