Advertisement

ನಟ ಮಂಡ್ಯ ರಮೇಶ್‌ಗೆ ಜಂಗಮಶೆಟ್ಟಿ  ರಂಗ ಪ್ರಶಸ್ತಿ

02:53 PM Jul 04, 2017 | |

ಕಲಬುರಗಿ: ನಗರದ ರಂಗ ಸಂಗಮ ಕಲಾ ವೇದಿಕೆ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ನಾಲ್ಕನೇ ದಿ| ಎಸ್‌.ಬಿ.
ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಹಿರಿಯ ನಟ, ಕಲಾವಿದ ಮಂಡ್ಯ ರಮೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು
ವೇದಿಕೆ ಕಾರ್ಯದರ್ಶಿ ಡಾ| ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

Advertisement

ಪ್ರಶಸ್ತಿಗೆ ಬಂದಿರುವ 66 ಅರ್ಜಿಗಳನ್ನು ಪರಿಶೀಲಿಸಿ, ಪ್ರಸಕ್ತ ಸಾಲಿನ ಪ್ರಶಸ್ತಿಗೆ ಮಂಡ್ಯ ರಮೇಶ ಅವರನ್ನು ಪರಿಗಣಿಸಿ ಆಯ್ಕೆ ಮಾಡಲಾಯಿತು. ಗುಬ್ಬಿ ವೀರಣ್ಣ ರಂಗ ಪುರಸ್ಕೃತ ಎಲ್‌.ಬಿ.ಕೆ. ಆಲ್ದಾಳ ಅವರ ಅಧ್ಯಕ್ಷತೆಯಲ್ಲಿ ನಡೆದ
ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ರಂಗತಜ್ಞ ಗವೀಶ ಹಿರೇಮಠ, ರಂಗಾಯಣ ಕಲಬುರಗಿ ಅಧ್ಯಕ್ಷ ಮಹೇಶ ಪಾಟೀಲ, ರಂಗಕರ್ಮಿ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ರಂಗಕರ್ಮಿ ಎಚ್‌.ಎಸ್‌. ಬಸವಪ್ರಭು ಹಾಗೂ ರಂಗ ಸಂಗಮ ಕಲಾವೇದಿಕೆ ಕಾರ್ಯದರ್ಶಿ ಡಾ| ಸುಜಾತಾ ಜಂಗಮಶೆಟ್ಟಿ ಅವರನ್ನೊಳಗೊಂಡ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಿತು. ಜು. 18ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು
ಡಾ| ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next