Advertisement

ಬ್ಯಾಡಗಿಯಲ್ಲಿ ನಟ ದರ್ಶನ್‌ ನೋಡಲು ಜನಸಾಗರ

07:46 PM Jul 22, 2021 | Team Udayavani |

ಬ್ಯಾಡಗಿ: ಪಟ್ಟಣದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರ ಅತಿಥಿ ಗೃಹಕ್ಕೆ ಖಾಸಗಿ ಭೇಟಿ ನೀಡಿದ್ದ ಚಿತ್ರ ನಟ ದರ್ಶನ್‌ ಅವರನ್ನು ನೋಡಲು ಬುಧವಾರ ಜನಸಾಗರವೇ ಸೇರಿತ್ತು.

Advertisement

ಕಳೆದ ಕೆಲ ದಿನಗಳಿಂದ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿರುವ ಚಿತ್ರ ನಟ ದರ್ಶನ್‌ ಕಳೆದ ಸೋಮವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರಿಗೆ 74ನೇ ಜನ್ಮದಿನದ ಶುಭಾಶಯ ತಿಳಿಸಲು ಬಂದಿದ್ದರು ಎನ್ನಲಾಗಿದೆ.

ನಟ ದರ್ಶನ್‌ ಅವರು ಬ್ಯಾಡಗಿ ಪಟ್ಟಣಕ್ಕೆ ಗೌಪ್ಯವಾಗಿ ಭೇಟಿ ನೀಡಿದ ಕುರಿತು ಮಾಹಿತಿ ಪಡೆದ ಅಭಿಮಾನಿಗಳು ಮಂಗಳವಾರ ತಡರಾತ್ರಿಯೂ ಗುಮ್ಮನಹಳ್ಳಿ ರಸ್ತೆಯಲ್ಲಿರುವ ಗೆಸ್ಟ್‌ಹೌಸ್‌ ಬಳಿ ಸೇರಿ ನೆಚ್ಚಿನ ನಟನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.

ಅಭಿಮಾನಿಗಳ ಒತ್ತಡಕ್ಕೆ ಮಣಿದು ದರ್ಶನ್‌ ಕೆಲವರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಬುಧವಾರ ಸಹ ದರ್ಶನ್‌ ಅವರನ್ನು ನೋಡಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಗೆಸ್ಟ್‌ಹೌಸ್‌ ಬಳಿ ಸೇರಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಹೊರ ಬಂದ ದರ್ಶನ್‌ ನೇರವಾಗಿ ಕಾರನ್ನೇರಿ ಸುರೇಶಗೌಡ ಪಾಟೀಲ ಮನೆಗೆ ತೆರಳಿ ಉಪಾಹಾರ ಸೇವಿಸಿದರು. ನಂತರ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next