Advertisement

ಕಾರ್ಯಕರ್ತರೇ ಕಾಂಗ್ರೆಸ್‌ಗೆ ಬೆನ್ನೆಲುಬು: ಶಿವಶಂಕರರೆಡ್ಡಿ

08:51 PM Mar 18, 2020 | Team Udayavani |

ಗೌರಿಬಿದನೂರು: ಯಾವುದೇ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಬೆನ್ನಲುಬಾಗಿದ್ದು ಪಕ್ಷ ನಿಷ್ಠೆ ಮರೆತರೆ ಅವರಿಗೆ ರಾಜಕೀಯ ಭಷ್ಯ ಶೂನ್ಯ ಖಚಿತ ಎಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು. ತಾಲೂಕಿನ ಚಿಕ್ಕಗಂಗಸಂದ್ರ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಪಕ್ಷಕ್ಕೆ ಮುಖಂಡರಿಗಿಂತ ಕಾರ್ಯಕರ್ತರೇ ಬೆನ್ನಲುಬು. ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಸೋಲು ಖಚಿತ. ಅದರಲ್ಲೂ ಕೆಲ ಮುಖಂಡರು ಚುನಾವಣೆ ಸಮಯದಲ್ಲಿ ಹಣದ ಆಸೆಗೆ ಪಕ್ಷದ್ರೋಹ ಬಗೆಯವುದು ಸಾಮಾನ್ಯ. ಆದರೆ ಕಾರ್ಯಕರ್ತರು ಮಾತ್ರ ಪಕ್ಷದ ಪರ ನಿಂತು ಕೆಲಸ ಮಾಡಿದರೆ ಮಾತ್ರ ಪಕ್ಷ ಆಡಳಿತಕ್ಕೆ ಬರುವುದು ಎಂದು ತಿಳಿಸಿದರು.

ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ತಳ ಮಟ್ಟದಲ್ಲಿ ಅವರ ಪರಿಶ್ರಮ ಅಗತ್ಯವಾಗಿದೆ ಎಂದು ತಿಳಿಸಿದರು. ಕುರುಬ ಸಮಾಜ ಮುಖಂಡ ಗಂಗಾಧರಗೌಡ, ನಮ್ಮ ಕುರುಬ ಸಮಾಜ ಮೊದಲನಿಂದ ಕಾಂಗ್ರೆಸ್‌ಗೆ ಒಲವು ತೋರುತ್ತಿದ್ದೇವೆ.

ಅದರಂತೆ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ನಮ್ಮ ಸಮುದಾಯಕ್ಕೆ ಹಲವಾರು ಸವಲತ್ತು ನೀಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ಇದೇ ವೇಳೆ ಕಾಂಗ್ರೆಸ್‌ ಸಿದ್ಧಾಂತಗಳನ್ನು ಮೆಚ್ಚಿ ಬಿಜೆಪಿಯ ಹಲವಾರು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ನಂಜುಂಡರೆಡ್ಡಿ, ನಾಗರಾಜು, ರಾಮಪ್ಪ, ಹರೀಶ್‌, ಬಸವ ಹಾಗೂ ಚಿಕ್ಕಗಂಗಸಂದ್ರದ ಹಲವು ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next