Advertisement

ಫ್ರಾಲೀ, ಪಂದಳ ರಾಜವಂಶಜ ಕೊಲ್ಲೂರು ಭೇಟಿ

10:14 AM Nov 03, 2018 | Team Udayavani |

ಕೊಲ್ಲೂರು: ಪದ್ಮಭೂಷಣ ಡೇವಿಡ್‌ ಫ್ರಾಲೀ ಮತ್ತು ಪಂದಳ ರಾಜವಂಶಸ್ಥ ಶಶಿಕುಮಾರ ವರ್ಮ ಅವರು  ಶುಕ್ರವಾರ ಸಕುಟುಂಬಿಕರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Advertisement

ಭಾರತೀಯ ಸಂಸ್ಕೃತಿ, ಸಂಸ್ಕಾರ, ಧರ್ಮ, ಯೋಗ, ಆಯುರ್ವೇದಗಳಲ್ಲಿ ವಿಶೇಷ ಅಧ್ಯಯನ ಮಾಡಿರುವ ಡೇವಿಡ್‌ ಫ್ರಾಲೀ ಶ್ರೀದೇವಿಯ ದರ್ಶನ, ಪೂಜೆಯ ಬಳಿಕ ಸುದ್ದಿಗಾರರೊಡನೆ ಮಾತನಾಡಿ, ಹಿಂದೂ ಧರ್ಮಕ್ಕೆ ಅದ್ಭುತವಾದ ಪರಂಪರೆಯಿದೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ವಿಕಸನ ಸಾಧ್ಯ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಶರೀರದ ತ್ರಿದೋಷಗಳ ಹೊಂದಾಣಿಕೆ ಸಾಧ್ಯವಾಗಿ ವ್ಯಾಧಿಕ್ಷಮತ್ವ ಬಲ ವೃದ್ಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆಯುರ್ವೇದದ ಮೂಲ ಸಿದ್ಧಾಂತದಂತೆ ಜೀವನಕ್ರಮ ರೂಪಿಸಿಕೊಂಡಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಕ್ಷೇಮವಾಗಿರಲು ಸಾಧ್ಯ ಎಂದರು.


ಪಂದಳ ರಾಜವಂಶಜ ಭೇಟಿ
ಪಂದಳ ರಾಜ ಮನೆತನದ ಸದಸ್ಯ ಹಾಗೂ ಶಬರಿ ಕ್ಷೇತ್ರದ ಆಡಳಿತದಾರರಾದ ಶಶಿಕುಮಾರ ವರ್ಮ ಹಾಗೂ ಮೀರಾ ಶಶಿಕುಮಾರ ವರ್ಮ ಅವರು ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ, ಉಪಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಮಹೇಶ್‌ ಪೂಜಾರಿ, ರಮೇಶ ಗಾಣಿಗ ಕೊಲ್ಲೂರು, ಶಿವರಾಮಕೃಷ್ಣ ಭಟ್‌, ಸಂದೀಪ್‌, ಅಶೋಕ್‌ ಶೆಟ್ಟಿ, ಗಿರೀಶ್‌ ಶೆಟ್ಟಿ, ಸಂದೇಶ್‌, ಶಶಿಕುಮಾರ್‌ ಹಾಗೂ ದೇಗುಲದ ಅರ್ಚಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next