Advertisement

ನಾಮವರ್‌ ನಿಧನ

12:30 AM Feb 21, 2019 | Team Udayavani |

ಹೊಸದಿಲ್ಲಿ: ಹಿಂದಿ ಸಾಹಿತಿ ನಾಮವರ್‌ ಸಿಂಗ್‌ ದಿಲ್ಲಿಯಲ್ಲಿ ದೀರ್ಘ‌ಕಾಲೀನ ಅನಾರೋಗ್ಯದಿಂದಾಗಿ ಮಂಗಳವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. 92 ವರ್ಷದ ನಾಮವರ್‌ ಸಿಂಗ್‌ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ವಾರಗಳಿಂದ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು. ವಿಮರ್ಶಕರಾಗಿಯೂ ಹೆಸರಾಗಿದ್ದ ಅವರು ಛಾಯಾವಾದ್‌, ಇತಿಹಾಸ್‌ ಔರ್‌ ಆಲೋಚನಾ, ಕಹಾನಿ ನಯಿ ಕಹಾನಿ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿಂಗ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next