Advertisement

ಅಮೃತಸರ ರೈಲು ದುರಂತ: ರಾಜಕಾರಣ ಸಲ್ಲದು: ಸಚಿವ ಸಿಧು

11:59 AM Oct 20, 2018 | Team Udayavani |

ಅಮೃತಸರ : 61 ಮಂದಿಯನ್ನು ಬಲಿ ಪಡೆದಿರುವ ಅಮೃತಸರ ರೈಲು ದುರಂತದ ಬಗ್ಗೆ ಯಾರೇ ಆದರೂ ರಾಜಕಾರಣ ಮಾಡಬಾರದು; ಇದನ್ನು ಯಾರೂ ಉದ್ದೇಶಪೂರ್ವಕ ಮಾಡಿಲ್ಲ ಎಂದು ಪಂಜಾಬ್‌ ಸಚಿವ, ಸ್ಥಳೀಯ ಶಾಸಕ ನವಜ್ಯೋತ್‌ ಸಿಂಗ್‌ ಸಿಧು ಹೇಳಿದ್ದಾರೆ.

Advertisement

“ಹಾಗಿದ್ದರೂ ಈ ಅವಘಡದಲ್ಲಿ ಭಾರೀ ದೊಡ್ಡ ನಿರ್ಲಕ್ಷ್ಯವಿದೆ. ಅದೇನಿದ್ದರೂ ಇದೊಂದು ದುರದೃಷ್ಟದ ಅವಘಡ. ರೈಲು ಹಳಿಯ ಮೇಲೆ, ಅಲ್ಲೇ ಸಮೀಪದ ಕಲ್ಲಿನ ಮೇಲೆ ಕುಳಿತಿದ್ದ ಕೆಲವರನ್ನು ನಾನು ಮಾತನಾಡಿಸಿದ್ದೇನೆ. ರಾವಣನ ಪ್ರತಿಕೃತಿಯನ್ನು ದಹಿಸುವಾಗ ಅದರ ಜ್ವಾಲೆಯಿಂದ ಪಾರಾಗಲು ಅನೇಕರು ತಾವು ನಿಂತಲ್ಲಿಂದ ಹಿಂದೆ ಸರಿದರು. ಹಲವರು ತಮಗೆ ಗೊತ್ತಿಲ್ಲದೇ ರೈಲು ಹಳಿಯ ಮೇಲೆ ನಿಂತಿದ್ದರು’ ಎಂದು ಸಿಧು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next