Advertisement

Accident: ನಿವೃತ್ತ ಯೋಧ ಸಾವು

11:11 PM Jul 04, 2023 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಬೇಳೂರು ಕಲ್ಮಂಡೆ ಎಂಬಲ್ಲಿ ಟಿವಿಎಸ್‌ ಎಕ್ಸೆಲ್‌ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಕಿಡ್‌ ಆಗಿ ರಸ್ತೆಗೆ ಬಿದ್ದು ಇಲ್ಲಿನ ಆರ್ಮಿ ಮನೆ ನಿವಾಸಿ ನಿವೃತ್ತ ಯೋಧ ರಾಮ ಮೊಗವೀರ (71) ಅವರು ಮೃತಪಟ್ಟ ಘಟನೆ ಜು. 3ರಂದು ಬೆಳಗ್ಗೆ ಗಂಟೆ 11.30ರ ಸುಮಾರಿಗೆ ಸಂಭವಿಸಿದೆ.

Advertisement

ನಿವೃತ್ತ ಯೋಧ ರಾಮ ಮೊಗವೀರ ಅವರು ಎಂದಿನಂತೆ ಟಿವಿಎಸ್‌ ಎಕ್ಸೆಲ್‌ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಆಯತಪ್ಪಿ ರಸ್ತೆಗೆ ಉರುಳಿ ಬಿದ್ದಿದ್ದು, ಪರಿಣಾಮ ಗಾಯಗಳಾಗಿದೆ. ತತ್‌ಕ್ಷಣವೇ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಅಷ್ಟರಲ್ಲಿಯೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ ಹಾಗೂ ಉದ್ಯಮಿ ಸುರೇಶ್‌ ಬೇಳೂರು, ಹವಾಲ್ದಾರ್‌ ಯೋಗೀಶ್‌ ಮೊಗವೀರ ಸೇರಿದಂತೆ ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 ವರ್ಷ ಸೇನೆಯಲ್ಲಿ ಸೇವೆ
ರಾಮ ಮೊಗವೀರ ಅವರು 1952ರಲ್ಲಿ ಸೇನೆಗೆ ಸೇರ್ಪಡೆಗೊಂಡು, ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸುಮಾರು 22 ವರ್ಷ ಸೇವೆ ಸಲ್ಲಿಸಿದ್ದರು. ಇವರ ಸೇವೆಯನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next