Advertisement

ಅಪಘಾತ : ರಾಮ್‌ದೇವ್‌ ಆಪ್ತ ಸಲಹೆಗಾರ ಗಂಭೀರ

10:22 AM Mar 21, 2018 | |

ಸೊಲ್ಲಾಪುರ: ಪುಣೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಸ್ವಿಪ್ಟ್ ಕಾರಿನ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಯೋಗಗುರು ರಾಮ್‌ದೇವ್‌ ಬಾಬಾ ಅವರ ಆಪ್ತ ಸಲಹೆಗಾರ ರಾಜೇಶ್‌ ಪಾಲ್‌ (45) ಗಂಭೀರ ಗಾಯಗೊಂಡಿರುವ ಘಟನೆ ಟೆಂಬುರ್ಣಿ ಹತ್ತಿರ ಮಂಗಳವಾರ ಸಂಜೆ ನಡೆದಿದೆ.

Advertisement

ರಾಜೇಶ್‌ ಪಾಲ್‌ ಅವರು ಯೋಗಗುರು ರಾಮ್‌ದೇವ್‌ ಬಾಬಾ ಅವರ ಆಪ್ತ ಸಲಹೆಗಾರರಾಗಿದ್ದು,  ಅಕ್ಕಲ್‌ಕೋಟೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಯೋಗ ಶಿಬಿರದ ಆಯೋಜನೆಗಾಗಿ ಬಂದಿದ್ದರು. ಅವರು ಪುಣೆಯಿಂದ ವಿಮಾನ ಮೂಲಕ ಹರಿದ್ವಾರಕ್ಕೆ ಹೋಗುವವರಿದ್ದರು.

ಅಕ್ಕಲ್‌ಕೋಟೆಯ ಶಿಬಿರ ಮುಗಿಸಿಕೊಂಡು ಸೊಲ್ಲಾಪುರದಿಂದ ಪುಣೆಗೆ ಕಾರಿನಲ್ಲಿ  ತೆರಳುತ್ತಿದ್ದಾಗ ಟೆಂಬುರ್ಣಿಯ ಬೈಪಾಸ್‌ನಲ್ಲಿ ಕಾರು ಹಾಗೂ ಲಾರಿಯ ಮಧ್ಯೆ  ಅಪಘಾತ ಸಂಭವಿಸಿದ್ದು, ರಾಜೇಶ್‌ ಪಾಲ್‌ ಹಾಗೂ ಚಾಲಕ ಸಿದ್ದರಾಮ ಮಾಳಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next