Advertisement

ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ಸಾವು

12:11 PM Feb 06, 2018 | Team Udayavani |

ಬಾದೋನ್‌, ಉತ್ತರ ಪ್ರದೇಶ : ಬಂಧು ಒಬ್ಬರ ಅಂತ್ಯಕ್ರಿಯೆ ಮುಗಿಸಿ ರುದ್ರಭೂಮಿಯಿಂದ ಮರಳುತ್ತಿದ್ದವರಿಂದ ತುಂಬಿದ್ದ ಎಸ್‌ಯುವಿ ವಾಹನವೊಂದು ಉಷೇತ್‌ ಪ್ರದೇಶದಲ್ಲಿ ಟ್ರಾಕ್ಟರ್‌ ಟ್ರಾಲಿ ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ದುರಂತದಲ್ಲಿ  ಒಂದೇ ಕುಟುಂಬದ ಮೂವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ.

Advertisement

ಮೃತರನ್ನು ಸಿಯಾರಾಮ್‌ 60, ಕಲಾವತಿ 32, ಮತ್ತು ವೀರವತಿ 21 ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ತನಕ ಯಾರನ್ನೂ ಬಂಧಿಸಿಲ್ಲ; ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next