Advertisement

ಸಾಗರ: ಅಪರಿಚಿತ ವಾಹನ ಢಿಕ್ಕಿ; ಬೈಕ್ ಚಾಲಕ ಸಾವು

11:24 AM Mar 14, 2022 | Suhan S |

ಸಾಗರ: ಇಲ್ಲಿನ ಬಿಎಚ್ ರಸ್ತೆಯಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದ್ವಿಚಕ್ರಚಕ್ರವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಅರಳಿಕೊಪ್ಪದ ಕೃಷ್ಣಮೂರ್ತಿ (40) ಎಂದು ಗುರುತಿಸಲಾಗಿದೆ.

ಕೃಷ್ಣಮೂರ್ತಿಯವರ ಜತೆ ದ್ವಿಚಕ್ರವಾಹನದಲ್ಲಿದ್ದ ಅರಳಿಕೊಪ್ಪದ ಬಾಲರಾಜ್ ಎಂಬುವವರಿಗೆ ಸಹ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತಕ್ಕೆ ಕಾರಣವಾದ ವಾಹನ ಪತ್ತೆಯಾಗಿಲ್ಲ.

ಮೃತ ಕೃಷ್ಣಮೂರ್ತಿಯವರ ಸಹೋದರ ಸೀತಾರಾಮ ಭಾನುವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next