Advertisement

ಇವಿಎಂ ದೂಷಿಸಬೇಡಿ, ಸೋಲನ್ನು ಒಪ್ಪಿಕೊಳ್ಳಿ; ವಿಪಕ್ಷಗಳಿಗೆ ರವಿಶಂಕರ್ ಪ್ರಸಾದ್

07:10 AM May 23, 2019 | Nagendra Trasi |

ನವದೆಹಲಿ:ವಿದ್ಯುನ್ಮಾನ(ಇವಿಎಂ) ಮತಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮತ್ತೊಂದು ಬಾರಿಯೂ ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಪ್ರಧಾನಿಯಾಗಲಿದ್ದಾರೆ. ವಿರೋಧ ಪಕ್ಷಗಳ ಸೋಲನ್ನು ಒಪ್ಪಿಕೊಳ್ಳಲೇಬೇಕಾಗಿದೆ ಎಂದು ತಿಳಿಸಿದ್ದಾರೆ.

Advertisement

ಮಮತಾ ಬ್ಯಾನರ್ಜಿ, ಎನ್ ಚಂದ್ರಬಾಬು ನಾಯ್ಡು ಮತ್ತು ಅಮರೀಂದರ್ ಸಿಂಗ್ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಲು ಯಾವುದೇ ತೊಂದರೆಯಾಗಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮಾತ್ರ ಇವಿಎಂ ಸರಿ ಇರೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಎರಡು ಬಾರಿ ಪಶ್ಚಿಮಬಂಗಾಳ ಮುಖ್ಯಮಂತ್ರಿಯಾದಾಗ ಮಮತಾ ಬ್ಯಾನರ್ಜಿಗೆ ಇವಿಎಂ ಉತ್ತಮವಾಗಿತ್ತು. ಅಮರೀಂದರ್ ಸಿಂಗ್ ಗೆ ಪಂಜಾಬ್ ಮುಖ್ಯಮಂತ್ರಿಯಾದಾಗಲೂ ಇವಿಎಂ ಸರಿ ಇತ್ತು. ಒಂದು ವೇಳೆ ಅವರು ಗೆದ್ದರೆ ಇವಿಎಂ ಸರಿ ಇದೆ ಎಂದು ಅರ್ಥ! ಆದರೆ ದೇಶದ ಜನರು ಬಯಸಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ..ಆಗ ಇವಿಎಂ ಅನ್ನು ನಂಬುವಂತಿಲ್ಲ!

ಈ ನಿಟ್ಟಿನಲ್ಲಿ ವಿಪಕ್ಷಗಳು ಸೋಲನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಇವಿಎಂ ಮೇಲೆ ಗೂಬೆ ಕೂರಿಸೋದನ್ನು ಬಿಡಿ ಎಂದು ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next