Advertisement

ಪಾವಗಡ : ಪ್ರೋತ್ಸಾಹಧನ ನೀಡಲು ಹಣಕ್ಕೆ ಬೇಡಿಕೆ ಇಟ್ಟ ವ್ಯಕ್ತಿ ಎಸಿಬಿ ಬಲೆಗೆ

06:46 PM Mar 04, 2022 | Team Udayavani |

ಪಾವಗಡ : ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್ ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ನೀಡಲು ಹಣ ಬೇಡಿಕೆ ಇಟ್ಟಿದ್ದು, ಫಲಾನುಭವಿಗಳಿಂದ 5000ರೂ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ತಾಲೂಕಿನ ಕಡಪಲಕೆರೆ ಗ್ರಾಮದ ಹರೀಶ್ ಪಿ ಎಂಬುವವರು ಅಂತರ್ಜಾತಿ ವಿವಾಹವಾಗಿದ್ದರು. ಇಲಾಖೆಯಿಂದ ನೀಡುವ ಪ್ರೋತ್ಸಾಹ ಧನ ಪಡೆಯಲು ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದರು.

ಪ್ರೋತ್ಸಾಹ ಧನದ ಬಾಂಡ್ ನೀಡಲು ಶಿವಕುಮಾರ್ ₹12000 ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹರೀಶ್ ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು ಶಿವಕುಮಾರ್ ಅವರು ಹರೀಶ್ ಅವರಿಂದ 5000 ರೂ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಡವರ ಮನೆಗೆ ಬೆಳಕು ನೀಡುವ ಬಜೆಟ್: ಸಚಿವ ಸುನೀಲ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next