Advertisement

ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ : ಪಿಎಸ್‌ಐ ಸೇರಿ ಐವರು ಪೊಲೀಸರ ಅಮಾನತು

04:20 PM Dec 13, 2021 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ, ಎಎಸ್‌ಐ ಸೇರಿದಂತೆ
5 ಜನ ಸಿಬ್ಬಂದಿಯನ್ನು ಎಸ್ಪಿ ಡಾ| ಅರುಣ್‌ ಕೆ. ಭಾನುವಾರ ಅಮಾನತು ಮಾಡಿ ಆದೇಶಿಸಿದ್ದಾರೆ.

Advertisement

ಸಿಪಿಐ ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ವೃತ್ತದ ಐಜಿಪಿಗೆ ವಿಜಯನಗರ ಎಸ್ಪಿ ಡಾ| ಅರುಣ್‌ ಕೆ ಅವರು ಭಾನುವಾರ ಶಿಫಾರಸ್ಸು ಮಾಡಿದ್ದಾರೆ. ಕೊಟ್ಟೂರು ಠಾಣೆಯ ಪಿಎಸ್‌ ಐ ನಾಗಪ್ಪ, ಎಎಸ್‌ ಐ ಸೈಪುಲ್ಲಾ, ಸಿಬ್ಬಂದಿ ತಿಪ್ಪೇಸ್ವಾಮಿ, ಕೊಂಡಿ ಬಸವರಾಜ್‌ ಹಾಗೂ ನಾಗರಾಜ್‌ ಅಮಾನತುಗೊಂಡಿದ್ದಾರೆ. ಸಿಪಿಐ ಮುರುಗೈಶ್‌ರನ್ನು ಅಮಾನತು ಮಾಡುವಂತೆ ಐಜಿಪಿಗೆ ಶಿಫಾರಸು ಮಾಡಿದ್ದಾರೆ. ಕೊಟ್ಟೂರು ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್‌ ನಾಯ್ಕ ಬಳಿ ಲಂಚ ಪಡೆಯುವ ವೇಳೆ ಬಳ್ಳಾರಿಯ ಎಸಿಬಿ ಅಧಿಕಾರಿಗಳು ಶನಿವಾರ ಟ್ರಾಪ್‌ ಮಾಡಿದ್ದರು. 2.30 ಲಕ್ಷ ರೂ. ಹಣ ಪಡೆಯುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದರು.

ಇದನ್ನೂ ಓದಿ : ಸಮಯಕ್ಕೆ ಸರಿಯಾಗಿ ಬಾರದ ಬಸ್ : ವಿದ್ಯಾರ್ಥಿಗಳಿಂದ ರಸ್ತೆ ತಡೆದು  ಪ್ರತಿಭಟನೆ  

Advertisement

Udayavani is now on Telegram. Click here to join our channel and stay updated with the latest news.

Next