Advertisement

ಮನೆಯಲ್ಲಿ ಕೆಜಿಗಟ್ಟಲೆ ಬಂಗಾರವಿದ್ದರೂ ಬ್ಯಾಂಕ್ ಲಾಕರ್ ಖಾಲಿ! ; ಎಸಿಬಿ ಶಾಕ್

02:12 PM Nov 25, 2021 | Team Udayavani |

ಶಿವಮೊಗ್ಗ: ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರಿಗೆ ಸೇರಿದ ಎಸ್ ಬಿಐ ಬ್ಯಾಂಕ್ ಲಾಕರನ್ನು ಗುರುವಾರ ಎಸಿಬಿ ಅಧಿಕಾರಿಗಳು ಪರೀಶೀಲನೆ ನಡೆಸಿದ್ದು, ಆದರೆ ಲಾಕರ್ ನಲ್ಲಿ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ.

Advertisement

ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಮನೆಯ ಮೇಲೆ ಬುಧವಾರ ನಡೆದ ದಾಳಿಯಲ್ಲಿ ಭಾರಿ ಪ್ರಮಾಣದ ಸಂಪತ್ತು ಪತ್ತೆಯಾಗಿತ್ತು.

ಬ್ಯಾಂಕ್ ಮ್ಯಾನೇಜರ್ ಜೊತೆಗೆ ಮಾತನಾಡಿ ಬಳಿಕ ಲಾಕರ್ ಓಪನ್ ಮಾಡಲಾಗಿದೆ, ಎಸಿಬಿ ಡಿವೈಎಸ್ ಪಿ ಲೋಕೇಶಪ್ಪ, ಬ್ಯಾಂಕ್ ಮ್ಯಾನೇಜರ್ ಇಬ್ಬರು ಸೇರಿ ರುದ್ರೇಶಪ್ಪ ಸಮ್ಮುಖದಲ್ಲೇ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ಖಾಲಿ ಇದ್ದು, ಯಾವುದೆ ದಾಖಲೆಗಳು ಪತ್ತೆಯಾಗಿಲ್ಲ.

ರುದ್ರೇಶಪ್ಪ ಅವರ ಲಾಕರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಎಸಿಬಿ ಅಧಿಕಾರಿಗಳು‌ ಖಾಲಿ ಇದ್ದಿದ್ದನ್ನು ನೋಡಿ ಎಸಿಬಿ ಅಧಿಕಾರಿಗಳೇ ಶಾಕ್ ಗೆ ಒಳಗಾಗಿದ್ದಾರೆ.

ರುದ್ರೇಶಪ್ಪ ಮನೆಯಲ್ಲಿ ಕೆಜಿ, ಕೆಜಿ ಬಂಗಾರ ಪತ್ತೆಯಾಗಿದ್ದರಿಂದ ಲಾಕರ್ ನಲ್ಲೂ ದಾಖಲೆಗಳು ಅಥವಾ ಬಂಗಾರ ಸಿಗಬಹುದು ಎಂದು ನಿರೀಕ್ಷೆ ಯನ್ನು ಎಸಿಬಿ ಅಧಿಕಾರಿಗಳು ಇಟ್ಟುಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next