Advertisement

ಎಸಿ ದಾಳಿ: 62 ಟಿಪ್ಪರ್‌ ಮರಳು ವಶಕ್ಕೆ

11:40 AM Feb 02, 2018 | Team Udayavani |

ಅಫಜಲಪುರ: ಜಿಲ್ಲಾ ಸಹಾಯಕ ಆಯುಕ್ತರಾದ ಸುಶೀಲಾ ಬಾನೋಟ ತಾಲೂಕಿನ ಶಿವಪುರ ಗ್ರಾಮಕ್ಕೆ ದಿಢೀರ್‌ ಭೇಟಿ ನೀಡಿ ಅಕ್ರಮ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳ ಪರಿಶೀಲಿಸಿ 62 ಟಿಪ್ಪರ್‌ನಷ್ಟು ಅಕ್ರಮ ಮರಳನ್ನು ಜಪ್ತಿ ಮಾಡಿದ್ದಾರೆ.

Advertisement

ತಾಲೂಕಿನ ಶಿವಪುರ ಗ್ರಾಮಕ್ಕೆ ಜ. 31ರಂದು ಸಂಜೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಕ್ರಮ ಮರಳು  ಸಂಗ್ರಹಗಾರಗಳನ್ನು ಪರಿಶೀಲಿಸಿದರು. ಭೇಟಿಯ ವೇಳೆ ಕಂಡುಬಂದ ಸುಮಾರು 62 ಟಿಪ್ಪರ್‌ನಷ್ಟು ಮರಳನ್ನು ಜಪ್ತಿ ಮಾಡಿದರು.

ನಂತರ ಮಾತನಾಡಿದ ಅವರು, ತಾಲೂಕಿನ ಭೀಮಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರೇ ಆಗಲಿ ಅಕ್ರಮ ಮರಳು ಧಂದೆ ಮಾಡಿದರೆ ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದರು.

ತಹಶೀಲ್ದಾರ್‌ ಇಸ್ಮಾಯಿಲ್‌ ಮುಲ್ಕಿಸಿಪಾಯಿ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಮೇಲೆ ಸದಾ ಕಣ್ಣಿಟ್ಟಿದ್ದೇವೆ. ಅಕ್ರಮ ಮರಳು ದಂಧೆ ಕಂಡು ಬಂದರೆ ಕ್ರಮ ಕೈಗೊಂಡು ನಿಮ್ಮ ಗಮನಕ್ಕೆ ತರುತ್ತೇವೆ ಎಂದು ಎಸಿ ಸುಶೀಲಾ ಬಾಣೋಟ್‌ ಅವರಿಗೆ ತಿಳಿಸಿದರು. ಪ್ರೊ| ಎಸಿ ರಮೇಶ ಕೋಲಾರ, ಪಿಎಸ್‌ಐ ಸಂತೋಷ ರಾಠೊಡ, ಎಎಸ್‌ಐ ಕೃಷ್ಣಮೂರ್ತಿ ಪಾಟೀಲ, ಪಿಡಬ್ಯುಡಿ ಎಇಇ ಮಾಣಿಕ ಕನಕಟ್ಟಿ, ಎಇ ಹೊನ್ನೇಶ, ಕಂದಾಯ ನಿರೀಕ್ಷಕ ಬಗಲಿ, ಗ್ರಾಮ ಲೆಕ್ಕಿಗ ಮಹಾಬಲಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next