Advertisement

Judge: ಅಕ್ರಮ ಮರಳು ಮಾಫಿಯಾಗೆ ಬಲಿಯಾದ ಅಧಿಕಾರಿಯ ಮಗ ಈಗ‌ ಜಡ್ಜ್!

08:47 AM Feb 21, 2024 | Team Udayavani |

ತೂತುಕುಡಿ: ಅಕ್ರಮ ಮರಳು ದಂಧೆಯನ್ನು ತಡೆಯಲು ಯತ್ನಿಸುವಾಗ ಕೊಲೆಯಾಗಿದ್ದ ಗ್ರಾಮ ಆಡಳಿತ ಅಧಿಕಾರಿಯ ಮಗನೀಗ ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ತಮಿಳುನಾಡಿನ ತೂತುಕುಡಿಯ ಏಸುವಾದಿಯಾನ್‌ ಇಂಥದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

Advertisement

2023ರ ಏ.25ರಂದು ಅಕ್ರಮ ಮರಳು ಗಣಿಗಾರಿಕೆ ತಡೆಯಲು ಯತ್ನಿ ಸುವಾಗ ಮುರಪ್ಪನಾಡಿನ ಗ್ರಾಮೀಣ ಆಡಳಿತಾಧಿಕಾರಿಯಾಗಿದ್ದ ಲಾರ್ಡ್‌ ಫ್ರಾನ್ಸಿನ್‌ ಹತ್ಯೆಗೀಡಾಗಿದ್ದರು. ಅದಾಗಿ 10 ತಿಂಗಳ ಅಂತರದಲ್ಲಿ ಸಿವಿಲ್‌ ನ್ಯಾಯಾಧೀಶನಾಗುವ ಮೂಲಕ ಏಸುವಾದಿಯಾನ್‌ ತಮ್ಮ ತಂದೆಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸಿವಿಲ್‌ ನ್ಯಾಯಾಧೀಶ ರಾಗಿ ಆಯ್ಕೆ ಯಾಗಿರುವ ಬಗ್ಗೆ ಸಂತಸ ಹಂಚಿ ಕೊಂಡಿರುವ ಏಸುವಾದಿ ಯಾನ್‌, ನನ್ನಂಥ ಯುವಕರು ಶ್ರಮ ಪಡುವು ದನ್ನು ನಾನು ಬಯಸುತ್ತೇನೆ. ಬದುಕಿ ನಲ್ಲಿ ಶಿಕ್ಷಣ ಮಾತ್ರ ನಮಗೆ ಒಳ್ಳೆಯ ಸ್ಥಾನ ನೀಡಬಲ್ಲದು ಎಂದಿದ್ದಾರೆ. ಪುಡುಕೊಟ್ಟಾಯಿಯ ಸರ್ಕಾರಿ ಶಾಲೆ ಯಲ್ಲಿ ಓದಿರುವ ಏಸುವಾದಿಯಾನ್‌, ಚೆನ್ನೈಯಲ್ಲಿ ಕಾನೂನು ಪದವಿ ಮುಗಿಸಿದ್ದರು.

ಫ್ರಾನ್ಸಿನ್‌ ಸಾವು ಇಡೀ ತಮಿಳು ನಾಡು ರಾಜ್ಯವನ್ನೇ ತಲ್ಲಣಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next