Advertisement

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

08:49 PM Apr 23, 2024 | Team Udayavani |

ಕಾಪು: ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉದ್ಯಾವರ ಚೆಕ್‌ಪೋಸ್ಟ್‌ ಬಳಿ ಚುನಾವಣ ಕರ್ತವ್ಯ ನಿರತ ಸಿಬಂದಿ ಪತ್ತೆ ಹಚ್ಚಿದ್ದಾರೆ.

Advertisement

ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ ಉಡುಪಿ ಕಡೆಗೆ ಬಂದ ಟಿಪ್ಪರ್‌ ಲಾರಿಯನ್ನು ಪರಿಶೀಲಿಸಿದಾಗ ವಾಹನದಲ್ಲಿ 1 ಯುನಿಟ್‌ನಷ್ಟು ಮರಳು ಇರುವುದು ಪತ್ತೆಯಾಗಿತ್ತು.

ಈ ಬಗ್ಗೆ ವಾಹನದ ಚಾಲಕನಲ್ಲಿ ಮರಳು ಮತ್ತು ವಾಹನದ ಪರವಾನಿಗೆ ಬಗ್ಗೆ ಕೇಳಿದಾಗ ವಾಹನವು ಪ್ರಭಾಕರ್‌ ಅವರಿಗೆ ಸೇರಿದ್ದಾಗಿದ್ದು ಅವರ ಸಹೋದರ ಹರೀಶ ಅವರ ಹೊಸ ಮನೆ ನಿರ್ಮಾಣ ಕಾಮಗಾರಿಯಿಂದ ಉಳಿದ ಮರಳನ್ನು ಉದ್ಯಾವರ ಬೊಳೆಗೆ  ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದ.

ಈ ಸಂಬಂಧ ಬಾಗಲಕೋಟೆ ಮೂಲದ ಟಿಪ್ಪರ್‌ ಚಾಲಕ ಶಿವಾನಂದ ಬಿ. ನೇಕಾರನನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ಟಿಪ್ಪರ್‌ ಲಾರಿ ಸಹಿತ ಮರಳನ್ನು ಕಾಪು ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next