Advertisement

ರೈತರಿಂದ ಧಿಕ್ಕಾರ

08:38 AM Jun 23, 2019 | Lakshmi GovindaRaj |

ಚಿಕ್ಕೋಡಿ/ಬೆಳಗಾವಿ: ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತಿ ಜನ-ಜಾನುವಾರುಗಳು ಸಂಕಷ್ಟಕ್ಕೀಡಾದಾಗ ಆಲಿಸಲು ಬಾರದವರು ಮಳೆಗಾಲ ಬಂದ ಮೇಲೆ ನದಿ ನೀರು ನೋಡಲು ಬಂದಿರುವುದು ಯಾವ ಪುರುಷಾರ್ಥಕ್ಕೆ ಎಂದು ರೈತರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೃಷ್ಣಾ ನದಿ ನೀರು ಮತ್ತು ವಿವಿಧ ಬ್ಯಾರೇಜ್‌ಗಳ ವೀಕ್ಷಣೆಗೆ ಗಡಿ ಭಾಗಕ್ಕೆ ಆಗಮಿಸಿದ ಸಚಿವರ ವಿರುದ್ಧ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ರೈತರು ಧಿಕ್ಕಾರ ಕೂಗಿದರು.

ಈ ಮಧ್ಯೆ ಬೆಳಗಾವಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ, ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ, ಈಗ ಪ್ರವಾಸ ಕೈಗೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next