Advertisement

ಅಪಹರಣ: ಆರೋಪ ಅಲ್ಲಗಳೆದ ಕೇರಳ ಸಿಎಂ

10:10 AM Feb 27, 2017 | Team Udayavani |

ತಿರುವನಂತಪುರ: ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾರಧ್ದೋ ಸಂಚಿದೆ ಎಂಬ ವಾದವನ್ನು ಕೇರಳ ಸಿಎಂ ತಿರಸ್ಕರಿಸಿದ್ದರು ಎಂಬ ಪ್ರತಿಪಕ್ಷಗಳ ಆರೋಪವನ್ನು ಪಿಣರಾಯಿ ವಿಜಯನ್‌ ಅಲ್ಲಗಳೆದಿದ್ದಾರೆ. 

Advertisement

“ಪ್ರಕರಣದಲ್ಲಿ ಸಂಚು ಇಲ್ಲ ಎಂದು ನಾನು ಹೇಳಿಯೇ ಇಲ್ಲ. ಈ ವಿಚಾರದಲ್ಲಿ ಮಾಧ್ಯಮವೊಂದರ ವರದಿಯನ್ನು ನಾನು ಉಲ್ಲೇ­ಖೀಸಿದ್ದೆ ಅಷ್ಟೆ. ಏನೇ ಆಗಿದ್ದರೂ, ತನಿಖೆಯ ಬಳಿಕ ಬೆಳಕಿಗೆ ಬರಲೇ­ ಬೇಕು,’ ಎಂದು ಸಿಎಂ ಪಿಣರಾಯಿ ಭಾನುವಾರ ತಿಳಿಸಿದ್ದಾರೆ. ಇದೇ ವೇಳೆ, ಆರೋಪಿ ಸುನಿ ಮತ್ತು ಸಹಚರ ವಿ.ಪಿ.ವಿಗೀಶ್‌ರನ್ನು ಭಾನುವಾರ ವಿಶೇಷ ತನಿಖಾ ತಂಡದ ಅಧಿಕಾರಿಗಳು ಕೊಯಮತ್ತೂರಿಗೆ ಕರೆದೊಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next