Advertisement

ಎಬಿಡಿಗೆ “ಕುಡ್ಲ’ಅಂದರೆ ತುಂಬಾ ಇಷ್ಟ !

11:20 PM Sep 22, 2020 | mahesh |

ಮಹಾನಗರ: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಗೆದ್ದು ಬೀಗುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ತಂಡದ ಕುರಿತಾದ ವಿಡಿಯೋ, ಫೋಟೊಗಳನ್ನು ಟ್ರೋಲ್‌ ಪೇಜ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರ ಜತೆಯಲ್ಲಿ ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿಡಿ ವಿಲಿಯರ್ ಅವರು ಮಂಗಳೂರು ಕುರಿತಾಗಿ ಹೇಳಿದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ನಟ ದಾನೀಶ್‌ ಸೇಟ್‌ ಅವರು ಎಬಿಡಿ ವಿಲಿಯರ್ ಅವರನ್ನು ಸಂದರ್ಶನ ಮಾಡುವ ವೀಡಿಯೋ ಇದಾಗಿದೆ. ಅದರಲ್ಲಿ ದಾನಿಶ್‌ ಅವರು ನೀವು ಕರ್ನಾಟಕದ ಯಾವ ಸ್ಥಳವನ್ನು ಇಷ್ಟಪಡುತ್ತೀರಿ ಎಂದು ಎಬಿಡಿ ಅವರಲ್ಲಿ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಎಬಿಡಿ ವಿಲಿಯರ್ “ಮಂಗಳೂರು ನನ್ನ ಇಷ್ಟದ ಸ್ಥಳ’ ಎಂದಿರುವ ವಿಡಿಯೋ ತುಣುಕು ಸದ್ಯ ವೈರಲ್‌ ಆಗಿದೆ. ಕರಾವಳಿಗರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಾಪ್‌ಗ್ಳಲ್ಲಿ ಟ್ರೆಂಡ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next