Advertisement

ಸರಕಾರಿ ರಜೆ ರದ್ದು: ಆಪ್‌ ಸರಕಾರಕ್ಕೆ ಯೋಗಿ ಮಾದರಿ

01:36 AM Apr 29, 2017 | Karthik A |

ಹೊಸದಿಲ್ಲಿ: ರಜೆಯ ವಿಚಾರದಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರವನ್ನು ದಿಲ್ಲಿಯ ಆಮ್‌ ಆದ್ಮಿ ಪಕ್ಷದ ಸರಕಾರ ಮಾದರಿಯಾಗಿಟ್ಟುಕೊಂಡಿದೆ. ಉತ್ತರಪ್ರದೇಶದ ಬೆನ್ನಲ್ಲೇ ಇದೀಗ ದಿಲ್ಲಿಯಲ್ಲೂ ಗಣ್ಯರ ಪುಣ್ಯತಿಥಿ ಮತ್ತು ಜಯಂತಿಗಳಿಗೆ ಸರಕಾರಿ ರಜೆ ನೀಡುವುದನ್ನು ನಿಷೇಧಿಸಲಾಗಿದೆ. ಶುಕ್ರವಾರ ಈ ಕುರಿತು ದಿಲ್ಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದಾರೆ. ‘ಶ್ರೇಷ್ಠ ವ್ಯಕ್ತಿಗಳ ಪುಣ್ಯ ತಿಥಿ ಮತ್ತು ಜಯಂತಿಗಳಿಗೆ ದಿಲ್ಲಿ ಸರಕಾರ ಸರಕಾರಿ ರಜೆಗಳನ್ನು ರದ್ದುಗೊಳಿಸಲಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ’ ಎಂದಿದ್ದಾರೆ.

Advertisement

ಅಷ್ಟೇ ಅಲ್ಲ, ಉತ್ತರಪ್ರದೇಶದ ಯೋಗಿ ಸರಕಾರವನ್ನು ಶ್ಲಾಘಿಸಿರುವ ಸಿಸೋಡಿಯಾ, ಅಲ್ಲಿನ ಸರಕಾರದ ನಿರ್ಧಾರ ಉತ್ತಮವಾದದ್ದು. ನಾವು ಒಳ್ಳೆಯ ಕೆಲಸಗಳನ್ನು ಯಾರೇ ಮಾಡಿದರೂ ಅದನ್ನು ಸ್ವೀಕರಿಸಲು ಸಿದ್ಧ ಎಂದಿದ್ದಾರೆ. ಇದೇ ತಿಂಗಳ 25ರಂದು ಆದೇಶ ಹೊರಡಿಸಿದ್ದ ಯೋಗಿ ಆದಿತ್ಯನಾಥ್‌ ಸರಕಾರ, ಶಾಲೆಗಳಿಗೆ ನೀಡಲಾಗುತ್ತಿದ್ದ 15 ರಜೆಗಳನ್ನು ರದ್ದು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next