Advertisement

ಆಪ್‌ನಲ್ಲೀಗ ನಾಯಕತ್ವ ಬದಲಾವಣೆಯ ಕೂಗು

01:30 AM Apr 29, 2017 | Team Udayavani |

ಹೊಸದಿಲ್ಲಿ: ಸತತ ಸೋಲುಗಳನ್ನು ಕಂಡ ಆಮ್‌ ಆದ್ಮಿ ಪಕ್ಷದಲ್ಲಿ ಇದೀಗ ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದಿದೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ವಿರುದ್ಧ ಪಕ್ಷದ ಮತ್ತೂಬ್ಬ ನಾಯಕ ಕುಮಾರ್‌ ವಿಶ್ವಾಸ್‌ ಬಹಿರಂಗವಾಗಿ ಹರಿಹಾಯ್ದಿದ್ದಾರೆ. ಶುಕ್ರವಾರ ಮಾತನಾಡಿದ ಕುಮಾರ್‌ ವಿಶ್ವಾಸ್‌, ‘ಪಕ್ಷದಲ್ಲಿ ದೊಡ್ಡಮಟ್ಟದ ಪುನಾರಚನೆ ಆಗಬೇಕು. ನಾವು ನಮ್ಮ ಸೋಲಿಗೆ ಕೇವಲ ಇವಿಎಂಗಳನ್ನು ದೂಷಿಸಿದರೆ ಸಾಲದು. ತಪ್ಪು ಇವಿಎಂನದ್ದಲ್ಲ, ಜನರ ವಿಶ್ವಾಸ ಗಳಿಸುವಲ್ಲಿ ನಮ್ಮ ವೈಫ‌ಲ್ಯವೂ ಸಾಕಷ್ಟಿದೆ’ ಎಂದಿದ್ದಾರೆ. ಜತೆಗೆ, ಪಂಜಾಬ್‌ ಚುನಾವಣೆಯಲ್ಲಿ ಸೋಲಲು ಟಿಕೆಟ್‌ ಹಂಚಿಕೆಯಲ್ಲಾದ ಲೋಪವೇ ಕಾರಣ ಎಂದಿದ್ದಾರೆ.

Advertisement

ಇದೇ ವೇಳೆ, ಸರ್ಜಿಕಲ್‌ ದಾಳಿಗೆ ಸಂಬಂಧಿಸಿ ಕೇಜ್ರಿವಾಲ್‌ ಅವರು ಪ್ರಧಾನಿ ಮೋದಿಯನ್ನು ದೂಷಿಸಿ ತಪ್ಪು ಮಾಡಿದರು ಎಂದೂ ಅಭಿಪ್ರಾಯಪಟ್ಟಿದ್ದಾರೆ ಕುಮಾರ್‌ ವಿಶ್ವಾಸ್‌. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಶುಕ್ರವಾರ ಕೇಜ್ರಿವಾಲ್‌ ಪಕ್ಷದ ಪ್ರತಿಯೊಬ್ಬ ಶಾಸಕನನ್ನೂ ಕರೆಸಿಕೊಂಡು, ಮಾತುಕತೆ ನಡೆಸಿದ್ದಾರೆ. ಈ ಮೂಲಕ ಎಂಸಿಡಿ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next