Advertisement

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

11:20 PM Sep 23, 2024 | Team Udayavani |

ಕುಂದಾಪುರ: ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ನಿವಾಸಿ ಕರುಣಾಕರ ಶೆಟ್ಟಿ (72) ಅವರ ಮೃತದೇಹವು ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ಶನಿವಾರ ಗುಜ್ಜಾಡಿ ಗ್ರಾಮದ ಕಳಿಹಿತ್ಲುವಿನ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿದ್ದು, ಮೂರು ದಿನ ಕಳೆದರೂ ಇನ್ನೂ ತಲೆ ಮಾತ್ರ ಪತ್ತೆಯಾಗಿಲ್ಲ. ಸೋಮವಾರವೂ ರುಂಡಕ್ಕಾಗಿ ಗಂಗೊಳ್ಳಿ ಠಾಣಾ ಪೊಲೀಸರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯಿತು.

Advertisement

ಗಂಗೊಳ್ಳಿ ಎಸ್‌ಐ ಹರೀಶ್‌ ಆರ್‌. ಮಾರ್ಗದರ್ಶನದಲ್ಲಿ ಸಿಬಂದಿಯ ಸಹಕಾರದೊಂದಿಗೆ ಸ್ಥಳೀಯ ಮುಳುಗು ತಜ್ಞ ದಿನೇಶ್‌ ಖಾರ್ವಿ ನೇತೃತ್ವದಲ್ಲಿ ರುಂಡಕ್ಕಾಗಿ ಹುಡುಕಾಟ ನಡೆಯಿತು. ಸೋಮವಾರ ಸ್ಥಳೀಯ ಮೀನುಗಾರರು ಸಹ ಪತ್ತೆ ಕಾರ್ಯದಲ್ಲಿ ಭಾಗಿಯಾದರು. ದೋಣಿಯ ಮೂಲಕ ಶೋಧ ಕಾರ್ಯಾಚರಣೆ ನಡೆದರೂ, ಯಾವುದೇ ಪ್ರಯೋಜನವಾಗಿಲ್ಲ.

ಸಾವಿಗೆ ಕಾರಣ ನಿಗೂಢ: ಕರುಣಾಕರ ಶೆಟ್ಟಿಯವರ ಸಾವಿಗೆ ಕಾರಣ ನಿಗೂಢವಾಗಿದೆ. ಸೆ. 19ರ ರಾತ್ರಿ ನಾಪತ್ತೆಯಾಗಿದ್ದು, ಸೆ. 21ರ ಬೆಳಗ್ಗೆ ಮೃತದೇಹ ಕಳಿಹಿತ್ಲುವಿನ ಹೊಳೆಯಲ್ಲಿ ಪತ್ತೆಯಾಗಿತ್ತು. ಬಂಟ್ವಾಡಿಯ ಸೇತುವೆಯಿಂದ ಕುತ್ತಿಗೆಗೆ ಹಗ್ಗ ಕಟ್ಟಿಕೊಂಡು ಹಾರಿರಬಹುದೇ? ಹಾಗೆ ಹಾರಿದಾಗ ದೇಹ ಹಾಗೂ ತಲೆ ಬೇರ್ಪಟ್ಟಿರಬಹುದೇ? ಅಥವಾ ಯಾರಾದರೂ ಕೊಲೆ ಮಾಡಿ ಹೀಗೆ ನದಿಗೆ ಎಸೆದಿರಬಹುದೇ ಎನ್ನುವ ಸಂಶಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next