Advertisement

ಜಾನುವಾರು ರಕ್ಷಿಸಲು ಹೋಗಿ ವರದಾ ನದಿಯಲ್ಲಿ ಕೊಚ್ಚಿಹೊದ ಯುವಕ

04:49 PM Aug 09, 2020 | keerthan |

ಹಾವೇರಿ: ರಾಜ್ಯದಲ್ಲಿ ಆಶ್ಲೇಷಾ ಮಳೆಯ ಅಬ್ಬರ ಹೆಚ್ಚಿದ್ದು, ಹಲವಾರು ಕಡೆ ಅಪಾರ ನಷ್ಟ ಸಂಭವಿಸಿದೆ, ಹಲವರು ಜೀವ ಕಳೆದುಕೊಂಡಿದ್ದಾರೆ. ಇಲ್ಲಿನ ನಡುಗಡ್ಡೆಯಲ್ಲಿ ಸಿಲುಕಿದ್ದ ಜಾನುವಾರು ರಕ್ಷಣೆ ಮಾಡಲು ಹೋದ ಯುವಕನೋರ್ವ ನೀರು ಪಾಲಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ರವಿವಾರ ನಡೆದಿದೆ.

Advertisement

ಚಂದ್ರಪ್ಪ ದಳವಾಯಿ (28) ವರದಾ ನದಿ ಪಾಲಾದ ಯುವಕ.

ಮೇಯಲು ಹೋದ ವೇಳೆ ನಡುಗಡ್ಡೆಯಲ್ಲಿ ಸಿಲುಕಿದ್ದ ಐದು ಎಮ್ಮೆಗಳ ರಕ್ಷಣೆಗೆ ಈ ಯುವಕ ತೆರಳಿದ್ದ ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಶೋಧಕ್ಕಾಗಿ ಕಾರ್ಯಾಚರಣೆ ಆರಂಭಿಸಿದೆ. ಆಡೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next