Advertisement

Gangolli: ಸ್ಕೂಟರ್‌ ಮೇಲೆ ಬಿದ್ದ ಮರದ ಕೊಂಬೆ

11:13 PM Sep 25, 2024 | Team Udayavani |

ಗಂಗೊಳ್ಳಿ: ಚಲಿಸುತ್ತಿದ್ದ ಸ್ಕೂಟರ್‌ನ ಮೇಲೆ ಮರ ಬಿದ್ದು, ಸವಾರ ಗಾಯಗೊಂಡ ಘಟನೆ ಬುಧವಾರ ಗಂಗೊಳ್ಳಿ- ತ್ರಾಸಿ ಮುಖ್ಯ ರಸ್ತೆಯ ತ್ರಾಸಿಯ ಹೋಲಿ ಕ್ರಾಸ್‌ ಸಮೀಪ ಸಂಭವಿಸಿದೆ.

Advertisement

ಗಂಗೊಳ್ಳಿಯ ನಿವಾಸಿ, ಧರ್ಮಗುರು ಮೊಹಮ್ಮದ್‌ ಮತೀನ್‌ ಸಾಹಬ್‌ ಸಿದ್ದಿಕಿ (51) ಗಾಯಗೊಂಡವರು. ಅವರು ಗಂಗೊಳ್ಳಿಯಿಂದ ತ್ರಾಸಿ ಕಡೆ ಹೋಗುತ್ತಿದ್ದಾಗ ಕೊಂಬೆ ಅವರ ಸ್ಕೂಟರ್‌ನ ಮೇಲೆ ಬಿದ್ದಿದೆ.

ತಲೆ ಹಾಗೂ ಕುತ್ತಿಗೆಗೆ ತೀವ್ರ ತರಹದ ಗಾಯಗಳಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next