Advertisement

Gangolli: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

09:16 PM Sep 11, 2024 | Team Udayavani |

ಗಂಗೊಳ್ಳಿ: ನಾವುಂದ ಗ್ರಾಮದ ಚಂದ್ರ (43) ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಮರವಂತೆ ಬಂದರಿನಿಂದ ದೋಣಿಯಲ್ಲಿ ಸಂಗಡಿಗರೊಂದಿಗೆ ಮೀನುಗಾರಿಕೆಗೆ ತೆರಳಿದ್ದಾಗ ಕುಸಿದು ಬಿದ್ದು ಬಳಿಕ ಮೃತಪಟ್ಟಿದ್ದಾರೆ.

Advertisement

ಗಾಳಿ ಮಳೆ ಒಮ್ಮೆಲೆ ಬೀಸಿದಾಗ ಕುಸಿದು ದೋಣಿಯಲ್ಲಿ ಬಿದ್ದು ಎದೆ ನೋವು ಎಂದು ಹೇಳಿ ಮೂರ್ಛೆ ಹೋದರು. ದೋಣಿಯಲ್ಲಿ ದಡಕ್ಕೆ ತಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆಯಲ್ಲಿರುವಾಗ ಮೃತಪಟ್ಟಿದ್ದಾರೆ.

ಸಹೋದರ ರತ್ನಾಕರ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next