Advertisement

ವೇತನ ಇಲ್ಲದೆ ಕಿಡ್ನಿ ಮಾರಾಟಕ್ಕಿಟ್ಟ ಸಾರಿಗೆ ನೌಕರ !

01:10 PM Feb 10, 2021 | Team Udayavani |

ಕುಷ್ಟಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಮ್ ನಿರ್ವಾಹಕ ಸೇವೆಯಲ್ಲಿರುವ ಜಿಲ್ಲೆಯ ಹನಮಂತ ಕಾಲೇಗಾರ ಅವರು, ವೇತನ ಇಲ್ಲದೆ ಕಿಡ್ನಿ ಮಾರಾಟಕ್ಕಿಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.

Advertisement

ಈ ಕುರಿತಾದ  ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕುಷ್ಟಗಿ ನಿವಾಸಿಯಾಗಿರುವ ಹನಮಂತ ಕಾಲೇಗಾರ ಗಂಗಾವತಿ ಬಸ್ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಪೂರ್ಣ ವೇತನ ಪಾವತಿಸದೇ ಎಲ್ಲವೂ ಕಡಿತಗೊಂಡು ಕಡಿಮೆ ವೇತನ ಪಾವತಿಯಾಗಿದೆ.

ಇದರಿಂದ ಮನನೊಂದಿರುವ ಹನಮಂತ ಕಾಲೇಗಾರ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವೇತನದಲ್ಲಿ ಬಾಡಿಗೆ ಮನೆ, ರೇಷನ್ ಗೆ ಹಣ ಸಾಕಾಗುವುದಿಲ್ಲ. ನನ್ನ  ಕಿಡ್ನಿ ಮಾರಾಟಕ್ಕಿದೆ ಎಂದು ಸ್ಟೇಟಸ್ ಹಾಕಿದ್ದಾರೆ.

ಇದನ್ನೂ ಓದಿ:  ನಮ್ಮ ಫೇಸ್ ಬುಕ್ ಅನ್ನು ಮತ್ತೊಬ್ಬರು ಬಳಸುವುದನ್ನು ತಡೆಯುವುದು ಹೇಗೆ?

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next