Advertisement

Tarikere; ಸೆಲ್ಫಿ ತೆಗೆಯುವ ವೇಳೆ ಜಲಪಾತದಿಂದ ಬಿದ್ದು ಪ್ರವಾಸಿಗ ಸಾವು

05:59 PM Jun 10, 2024 | Team Udayavani |

ಚಿಕ್ಕಮಗಳೂರು: ಜಲಪಾತ ನೋಡಲು ಬಂದಿದ್ದ ಪ್ರವಾಸಿಗನೊಬ್ಬ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ನಡೆದಿದೆ.

Advertisement

ಹೈದರಾಬಾದ್ ಮೂಲದ 25ರ ವರ್ಷದ ಯುವಕ ಶ್ರವಣ್ ಮೃತಪಟ್ಟಿದ್ದಾರೆ.

ಶ್ರವಣ್ ಮತ್ತು ಸ್ನೇಹಿತ ಹೈದರಾಬಾದ್ ನಿಂದ‌ ಕಾಫಿನಾಡಿನ ಪ್ರವಾಸ ಕೈಗೊಂಡಿದ್ದರು. ಇಂದು ಬೆಳಿಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್ ಗೆ ತೆರಳಿದ್ದರು. ಹೆಬ್ಬೆ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.

ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next