Advertisement

Yellapur: ಜಲಪಾತ ವೀಕ್ಷಿಸಲೆಂದು ಬಂದ ವ್ಯಕ್ತಿ ಈಜಲು ಹೋಗಿ ಮುಳುಗಿ ಸಾವು

08:35 AM Jun 19, 2024 | Team Udayavani |

ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತ ವೀಕ್ಷಿಸಲೆಂದು ಬಂದಿದ್ದ ಪ್ರವಾಸಿಗನೊಬ್ಬ ಜಲಪಾತದ ಎದುರಿರುವ ಆಳದ ನೀರಿನ ಪ್ರದೇಶದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ.

Advertisement

ಹಸನ್ ಮದಾರಸಾಬ್ ಕಾಲೆಮದರ್ (34) ಮೌಲಾಲಾ ದರ್ಗಾ ಹತ್ತಿರ ಹುಬ್ಬಳ್ಳಿ ಮೃತ ದುರ್ದೈವಿ.

ಮಂಗಳವಾರ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಈ ಬಗ್ಗೆ ಮಲ್ಲಿಕ್ ಬಸೀರ್ ಅಹಮದ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಈತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋಜು ಮಸ್ತಿಯಲ್ಲಿ ತೆರಳಿದ್ದರು:

Advertisement

ಮಂಗಳವಾರ ಸಾತೊಡ್ಡಿ ಜಲಪಾತದ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿತ್ತು. ದ್ವಿ ಚಕ್ರ ವಾಹನದಲ್ಲಿ 2-3 ಜನ, ಟಂ-ಟಂ ಗಾಡಿಯಲ್ಲಿ ಕಿಕ್ಕಿರಿದು ಜೋತುಕೊಂಡು ಪ್ರವಾಸಿಗರು ಹೋಗಿದ್ದರು. ಅಲ್ಲದೇ ರಸ್ತೆ ಪಕ್ಕದ ಅಂಗಡಿಗಳ ಎದುರು ವಾಹನ ನಿಲ್ಲಿಸಿ ಗುಂಪಾಗಿದ್ದುಕೊಂಡು ನಿತ್ಯ ಸಂಚಾರಿಗರು ಹಾದು ಹೋಗಲು ಪರದಾಡುವಂತೆ ಆಗಿತ್ತು. ಇವರ ವರ್ತನೆಗೆ ಸಾರ್ವಜನಿಕರು ಹಿಡಿಶಾಪ ಹಾಕಿ ತೆರಳಿದ್ದರು. ಸಾರ್ವಜನಿಕರು ಇವರ ದುರ್ವರ್ತನೆ ಬಗ್ಗೆ ಪೊಲೀಸರ ಗಮನಕ್ಕೆ ತಂದರು.

ಸಂಜೆ ವೇಳೆ ದೇಹಳ್ಳಿ ಆನಗೋಡ ರಸ್ತೆಗಳಲ್ಲಿ ಪ್ರವಾಸಿಗರದ್ದೇ ಜನಜಂಗುಳಿ. ಪ್ರವಾಸಕ್ಕೆ ಬಂದವರಲ್ಲಿ ಬೈಕ್ ಸವಾರರು ಚಿಕ್ಕವರು. ಲೈಸನ್ಸ್ ಇಲ್ಲ, ಹೆಲ್ಮೆಟ್ ಇಲ್ಲ. ಪೊಲೀಸರ ಕಣ್ತಪ್ಪಿಸಲು ಯಾವ್ಯಾವುದೋ ರಸ್ತೆ ಹುಡುಕಾಡಿದರು. ಹಳ್ಳಿಯೊಳಗಿನ ಜನರೂ ಈ ಹೊಸಬರನ್ನು ನೋಡಿ ಕಂಗಾಲಾದರು. ಸಂಜೆ ಕೆಲಹೊತ್ತು ಪ್ರವಾಸಿಗರು ಈ ಪ್ರದೇಶದಲ್ಲಿ ಆವಾಂತರಗಳನ್ನು ಸೃಷ್ಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next