Advertisement

ಮಕ್ಕಳ ಪ್ರತಿಭೆ ಗುರುತಿಸಲು ಸೂಕ್ತ ವೇದಿಕೆ ಅಗತ್ಯ

03:03 PM Dec 02, 2017 | Team Udayavani |



Advertisement

ಬೆಟ್ಟಂಪಾಡಿ: ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪೂರಕ. ಸುಪ್ತ ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕಿದರೆ ಮಾತ್ರ ಅನಾವರಣಗೊಳ್ಳಲು ಸಾಧ್ಯ ಎಂದು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು ಅಭಿಪ್ರಾಯಪಟ್ಟರು. ಅವರು ಬೆಟ್ಟಂಪಾಡಿ ಪದವಿಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾಲೇಜಿನ ವಿಂಶತಿಯ ಸವಿನೆನಪಿಗಾಗಿ ಹೊರತಂದ ‘ಬಿಲ್ವ ಚಿಗುರು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಉತ್ತಮ ಹೆಸರು ತನ್ನಿ
ಮುಖ್ಯ ಅತಿಥಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಸುಕನ್ಯಾ ಮಾತನಾಡಿ, ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿರುತ್ತವೆ. ಸಿಕ್ಕಿದ ಅವಕಾಶವನ್ನು ಮಕ್ಕಳು ಬಳಸಿಕೊಂಡು ಮುಂದೆ ಶಾಲೆಗೆ ಮತ್ತು ಊರಿಗೆ ಉತ್ತಮ ಹೆಸರನ್ನು ತರುವಲ್ಲಿ ಪ್ರಯತ್ನಿಸಬೇಕೆಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಡ್ಪಳ್ಳಿ  ಗ್ರಾ.ಪಂ. ಅಧ್ಯಕ್ಷೆ ಸುಮತಿ ಗಣೇಶ್‌ ಶುಭ ಹಾರೈಸಿದರು.

ತಾ| ಪಂಚಾಯತ್‌ ಸದಸ್ಯರಾದ ಹರೀಶ್‌ ಬಿಜತ್ರೆ, ಮೀನಾಕ್ಷಿ ಮಂಜುನಾಥ, ಬೆಟ್ಟಂಪಾಡಿ ಗ್ರಾ. ಪಂ. ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿ ಯಾಣಿ, ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ವೆಂಕಟ್ರಾವ್‌, ಸದಸ್ಯ ನಾಗರಾಜ್‌ ಘಾಟೆ ಮಾತನಾಡಿದರು.

ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ಪಿ.ಭಟ್‌, ಕಾಲೇಜು ಹಾಗೂ ಪ್ರೌಢ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯ ರಾದ ಅಬೂಬಕ್ಕರ್‌ ಕೊರಿಂಗಿಲ, ಮಹಾಬಲ ರೈ, ರಾಮಚಂದ್ರ ರೈ, ಹಸನ್‌ ಶಾಫಿ, ಸುಮಿತ್ರಾ, ಯಶೋದಾ, ಮಾಧವ ಪೂಜಾರಿ ರೆಂಜ, ನವೀನ್‌ ರೈ ಚೆಲ್ಯಡ್ಕ, ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಅವಿನಾಶ್‌ ರೈ, ಕೆ.ಡಿ.ಪಿ. ಸದಸ್ಯ ಕೃಷ್ಣಪ್ರಸಾದ್‌ ಆಳ್ವ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯೆ ಭವಾನಿ ಪಿ., ಉಪನ್ಯಾಸಕಿ ಗಾಯತ್ರಿ ಎಂ., ಜ್ಯೋತಿ, ರಘು, ಮಹೇಶ್‌ ಎಂ., ರಶ್ಮಿ ಉಪಸ್ಥಿತರಿದ್ದರು.

Advertisement

ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರಾಂಶುಪಾಲ ಬಿ. ಬಾಲಕೃಷ್ಣ ರಾವ್‌ ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಪದವೀಧರ ಶಿಕ್ಷಕ ಗಂಗಾಧರ. ಪಿ.ಎಸ್‌. ಪ್ರೌಢಶಾಲಾ ವರದಿ, ಹಿರಿಯ ಉಪನ್ಯಾಸಕಿ ರಜನಿ ಎಂ. ಕಾಲೇಜು ವರದಿ ವಾಚಿಸಿದರು. ಉಪನ್ಯಾಸಕ ಪ್ರಕಾಶ್‌ ಸ್ಮರಣ ಸಂಚಿಕೆಯ ಸ್ಥೂಲ ಪರಿಚಯ ನೀಡಿದರು. ಪದ್ಮನಾಭ ಎಸ್‌. ಬಹುಮಾನದ ಪಟ್ಟಿ ವಾಚಿಸಿದರು. ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ನಾರಾಯಣ ಕೆ. ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next