Advertisement

ಪಾರ್ವತಮ್ಮ ಒಂದು ನೆನಪು: ನಾಳೆ ಅಕಾಡೆಮಿಯಿಂದ ಕಾರ್ಯಕ್ರಮ

12:42 PM Jun 07, 2017 | |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗಷ್ಟೇ ಪಾರ್ವತಮ್ಮ ರಾಜಕುಮಾರ್‌ ಅವರ ಶ್ರದ್ಧಾಂಜಲಿ ಸಭೆ ಆಯೋಜಿಸಿತ್ತು. ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸರದಿ. ಜೂ.8 ರಂದು ಬೆಳಗ್ಗೆ 10.30ಕ್ಕೆ ಗಾಂಧಿಭವನದಲ್ಲಿ “ಡಾ.ಪಾರ್ವತಮ್ಮ ರಾಜಕುಮಾರ್‌ ಒಂದು ನೆನಪು’ ಕಾರ್ಯಕ್ರಮವನ್ನು ಅಕಾಡೆಮಿ ಆಯೋಜಿಸಿದೆ.

Advertisement

ಅಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಶಯ ಭಾಷಣ ಮಾಡಲಿದ್ದಾರೆ. ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಲಕ್ಷ್ಮೀನಾರಾಯಣ, ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ, ಪತ್ರಕರ್ತ ರಘುನಾಥ ಚ.ಹ. ಅವರು ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಅಂದು ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನಿತ್‌ ರಾಜಕುಮಾರ್‌ ಹಾಗೂ ರಾಜಕುಮಾರ್‌ ಕುಟುಂಬವರ್ಗ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 

ಉಳಿದಂತೆ ಅಂದು ಆ ಕಾರ್ಯಕ್ರಮದಲ್ಲಿ ನಟಿ ಜಯಮಾಲ, ತಾರಾ, ಶ್ರೀನಾಥ್‌, ಮುನಿರತ್ನ, ಟಿ.ಎಸ್‌ .ನಾಗಾಭರಣ, ಕೆ.ಸಿ.ಎನ್‌. ಚಂದ್ರಶೇಖರ್‌, ಅಶೋಕ್‌, ಎಂ.ಎಸ್‌. ರಮೇಶ್‌, ಭಗವಾನ್‌, ಭಾರ್ಗವ, ಎಸ್‌. ನಾರಾಯಣ್‌, ಎಸ್‌.ಎ. ಚಿನ್ನೇಗೌಡ, ಗೋವಿಂದರಾಜು, ಹೊನ್ನವಳ್ಳಿ ಕೃಷ್ಣ ಇತರರು ಪಾಲ್ಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next