Advertisement

ರಾಜ್ಯ ಬಜೆಟ್‌ನ ಪ್ರತಿಬಿಂಬ

11:39 AM Mar 26, 2017 | Team Udayavani |

ವೈಟ್‌ ಟಾಪಿಂಗ್‌, ಟೆಂಡರ್‌ ಶ್ಯೂರ್‌, ಗ್ರೇಡ್‌ ಸಪರೇಟರ್‌, ಮಳೆ ನೀರು ಚರಂಡಿಗಳ ಅಭಿವೃದ್ಧಿ, ಸ್ಕೈವಾಕ್‌ಗಳು ಸೇರಿದಂತೆ ಈ ಎಲ್ಲ ಅಂಶಗಳೂ ರಾಜ್ಯ ಬಜೆಟ್‌ನಲ್ಲಿ ಬಂದುಬಿಟ್ಟಿವೆ. ಅದಕ್ಕೆ ಸರ್ಕಾರ ಅನುದಾನವನ್ನೂ ಮೀಸಲಿಟ್ಟಾಗಿದೆ. ಈಗ ಪ್ರಶ್ನೆ ಇರುವುದು ಬಿಬಿಎಂಪಿ ಈ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಅನುಷ್ಠಾನಗೊಳಿಸುವುದು. ಮಳೆ ನೀರು ಚರಂಡಿಗಳ ಆಧುನೀಕರಣ, 110 ಹಳ್ಳಿಗಳಿಗೆ ನೀರು ಸೇರಿದಂತೆ ಯಾವುದನ್ನೂ ಸಮರ್ಪಕವಾಗಿ ಮಾಡಿಲ್ಲ.

Advertisement

ಕಳೆದ ವರ್ಷದ ಬಜೆಟ್‌ನಲ್ಲಿ ಶೇ. 65 ರಷ್ಟನ್ನೂ ಸಾಧಿಸಿಲ್ಲ. ಈ ಮಧ್ಯೆ ಮತ್ತೂಂದು ಅವಾಸ್ತವಿಕ ಬಜೆಟ್‌ ಮಂಡಿಸಲಾಗಿದೆ. ವಾಸ್ತವ ವಾಗಿ ಪಾಲಿಕೆಗೆ ಬಜೆಟ್‌ನಲ್ಲಿ ಹೇಳಿದಷ್ಟು ತೆರಿಗೆ ಸಂಗ್ರಹ ಆಗುವುದೇ ಇಲ್ಲ. ಬಜೆಟ್‌ ಘೋಷಣೆ ಗಳ ಅನುಷ್ಠಾನ ಪ್ರಗತಿ ಪರಿಶೀಲನೆಗೆ “ಪೌರ ವಾಹಿನಿ ತಂಡ ರಚನೆ’ ನಿರ್ಧಾರ ಸ್ವಾಗತಾರ್ಹ. ಇದು ಸರಿಯಾಗಿ ಕಾರ್ಯನಿರ್ವಹಿಸಿದರೆ, ಒಳ್ಳೆಯ ಫ‌ಲಿತಾಂಶ ಕಾಣಬಹುದು ಎಂಬ ವಿಶ್ವಾಸ ಇದೆ.
-ವಿ. ರವಿಚಂದರ್‌, ನಗರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next